ಕೊಲೆ ಆರೋಪಿಯ ಬಂಧನ : ಎಸ್ಪಿ ಲಕ್ಷ್ಮಣ ನಿಂಬರಗಿ

ದೇವರಹಿಪ್ಪರಗಿ : ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜ.೧೯ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ೪ಜನ ಆರೋಪಿಗಳನ್ನು ಕಲಕೇರಿ ಪೊಲೀಸರು ಬಂಧಿಸಿದ್ದಾರೆAದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಪರಶುರಾಮ ಮಡಿವಾಳಪ್ಪ ಬೇಡರ (೨೬) qಚ್ಪಿಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇಲೆ ತಿಪ್ಪಣ್ಣ ಬಸಪ್ಪ ರಕ್ಕಸಗಿ, ಶ್ರೀನಿವಾಸ ಶ್ರೀಶೈಲ ವಾಲೀಕಾರ, ಅಯ್ಯಣ್ಣ ಲವಾ ನಾಗರಾಳ, ಸಂತೋಷ ಸಂಗಪ್ಪ ದೊರೆಗೋಳ ಆರೋಪಿಗಳನ್ನು ಬಂದಿಸಲಾಗಿದ್ದು, ಇನ್ನೂಳಿದ ೩ ಜನ ಆರೋಪಿಗಳಾದ ಪ್ರಶಾಂತ ಕಳಸಪ್ಪ ವಡ್ಡರ, ಬಲವಂತ ಸಂಗಪ್ಪ ದೊರೆಗೋಳ, ಈರಗಂಟೆಪ್ಪ ಸಂಗಪ್ಪ ದೊರೆಗೋಳ ಇವರ ಪತ್ತೇಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ. ಜ.೧೯ರಂದು ಸುಮಾರು ಬೆಳಿಗ್ಗೆ ೭ಗಂಟೆಗೆ ಬಹಿರ್ದೆಸೆಗೆ ಹೋಗಿದ್ದಾಗ ಆರೋಪಿತರೆಲ್ಲರೂ ಕೈಯಲ್ಲಿ ಬಡಿಗೆ, ಕೊಡಲಿ ಹಾಗೂ ರಾಡ್ ಹಿಡಿದುಕೊಂಡು ಬಂದು ಮನೆ ಸಮೀಪವಿರುವ ಹಣಮಂತ ದೇವರ ಗುಡಿಯ ಹಿಂದೆ ಗುಂಪು ಕೂಡಿಕೊಂಡು ಸೀಗರೇಟ ಸೇದುವದು, ಸರಾಯಿ ಕುಡಿದು ನೀರಿಗೆ ಬರುವ-ಹೋಗುವ ಹೆಣ್ಣು ಮಕ್ಕಳಿಗೆ ಚುಡಾಯಿಸುವದು, ಕಾಡಿಸುವದು ಮಾಡುತ್ತಿದ್ದರಿಂದ ಪಿರ್ಯಾಧಿ ಮತ್ತು ಪಿರ್ಯಾದಿಯ ಅಣ್ಣ ಈರಗಂಟೆಪ್ಪ ಇವರು ಆರೋಪಿತರಿಗೆ ಹೆಣ್ಣು ಮಕ್ಕಳಿಗೆ ಯಾಕ ಕಾಡಸತೀರಿ ಗುಡಿ ಕಡೆಗೆ ಬರಬ್ಯಾಡ್ರೀ ಅಂತಾ ಗದರಿಸಿದ್ದರಿಂದ ಅವರೆಲ್ಲರೂ ಪಿರ್ಯಾದಿ ಮತ್ತು ಅಣ್ಣನ ಮೇಲೆ ಸಿಟ್ಟಾಗಿ ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.