ತಾಳಿಕೋಟೆ : ವೀರಶೈವ ವಿದ್ಯಾವರ್ದಕ ಸಂಘ ಹಾಗೂ ತಾಳಿಕೋಟಿಯ ಸಹಕಾರಿ ಬ್ಯಾಂಕ್ ಇವುಗಳನ್ನು ಹುಟ್ಟುಹಾಕಿದ ಹಿರಿಯರು ಇಂದು ಕಣ್ಮರೆಯಾಗಿದ್ದರೂ ಅವರು ಮಾಡಿದಂತಹ ಸಾಧನೆಗಳು ಮೆಚ್ಚುಗೆಗೆ ಪಾತ್ರವಾಗುತ್ತಾ ಸಾಗಿವೆ ಆದರೆ ಇವುಗಳನ್ನು ಚುಕ್ಕಾಣಿ ಹಿಡಿಯುತ್ತಾ ಸಾಗಿದವರೂ ಸಹ ಹಿಂದಿನವರ ಮಾರ್ಗ ಅನುಸರಿಸುತ್ತಾ ಸಾಗಿರುವದು ಮೆಚ್ಚುವಂತಹ ಕಾರ್ಯವಾಗಿದೆ ಎಂದು ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ನುಡಿದರು.
ಮಂಗಳವಾರ ವೀ.ವಿ.ಸಂಘದ ಶ್ರೀ ವಿರಕ್ತೇಶ್ವರ ಸಭಾಭವನದಲ್ಲಿ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಹಾಗೂ ನಿರ್ದೇಶಕ ಮಂಡಳಿಯವರ ಕುರಿತು ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಉಭಯಸ್ತರಿಗೆ ಸನ್ಮಾನಿಸಿ ಮಾತನಾಡುತ್ತಿದ್ದ ಅವರು ೨೨೫ ಕೋಟಿ ಬಂಡವಾಳ ಹೊಂದಿದ ಸಹಕಾರಿ ಬ್ಯಾಂಕ್ ಇನ್ನೂ ಅದನ್ನು ಉತ್ತೇಜಿಸುವ ಶಕ್ತಿ ನೂತನ ನಿರ್ದೇಶಕ ಮಂಡಳಿಯವರ ಕೈಯಲ್ಲಿದೆ ಆದರೆ ಭಿನ್ನಾಭಿಪ್ರಾಯ ಎಂಬAತಹದ್ದು ನಿರ್ದೇಶಕರಾದವರಲ್ಲಿ ಬರಬಾರದೆಂದು ಹೇಳಿದ ಹಿರೇಮಠ ಅವರು ವೀ.ವಿ.ಸಂಘ ಹುಟ್ಟುಹಾಕಿದವರು, ಸಹಕಾರಿ ಬ್ಯಾಂಕ್ ಹುಟ್ಟು ಹಾಕಿದವರು ಒಂದೇ ನಾಣ್ಯದ ಎರಡು ಮುಖಗಳಂತೆ ಸೇವೆ ಮಾಡಿದ್ದಾರೆ ಅದೇ ಭಾವನೆ ತಮ್ಮೇಲ್ಲರಲ್ಲಿ ಬರಲೆಂದು ಆಶಿಸಿದ ಅವರು ತಮ್ಮ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ಪ್ರಾಚಾರ್ಯರು ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪಧವಿ ಪಡೆದಂತಹ ಪ್ರಾಚಾರ್ಯ ಶ್ರೀಮತಿ ಜ್ಯೋತಿ ಹಿರೇಮಠ ಅವರಿಗೆ ಹಾಗೂ ಶ್ರೀಮತಿ ಬಿ.ಟಿ.ಸಜ್ಜನ, ಉಪನ್ಯಾಸಕ ಡಾ.ಎ.ಬಿ.ಇರಾಜ ಅವರು ಮಾಡಿದ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವಿಕರಿಸಿದ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಅವರು ಮಾತನಾಡಿ ವೀ.ವಿ.ಸಂಘದ ವಿರಕ್ತೇಶ್ವರ ಸಭಾಭವನದಲ್ಲಿ ಇಂದು ನಮಗೆ ಸನ್ಮಾನ ದೊರೆತಿರುವದು ಇನ್ನೂ ಹೆಚ್ಚಿನ ಸ್ಪೂರ್ತಿ ದೊರೆತಂತಾಗಿದೆ ಎಂದರು. ಶ್ರೀಮತಿ ಜ್ಯೋತಿ ಹಿರೇಮಠ, ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಸರಶೆಟ್ಟಿ, ಹಾಗೂ ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಮಾತನಾಡಿದರು.
ಈ ಸಮಯದಲ್ಲಿ ವೀ.ವಿ.ಸಂಘದ ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಬಸಣ್ಣವರ ಸರ್, ಗರುನಾಥ ರಡ್ಡಿ ಹಾಗೂ ವೀ.ವಿ.ಸಂಘದ ನಿರ್ದೇಶಕ ಮಂಡಳಿಯವರು, ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಐಶ್ವರ್ಯ ಚವ್ಹಾಣ ಪ್ರಾರ್ಥಿಸಿದರು. ಶ್ರೀಮತಿ ಡಾ.ದೀಪಾ ಮಾಳಗಿ ಸ್ವಾಗತಿಸಿದರು. ಕಾಶಿನಾಥ ದೇಸಾಯಿ ನಿರೂಪಿಸಿ ವಂದಿಸಿದರು.