ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಮನುಷ್ಯನ ಎಲ್ಲ ಸಂಪತ್ತುಗಳಲ್ಲಿ ಮುಖ್ಯವಾದ ಸಂಪತ್ತು ಆರೋಗ್ಯ ಸಂಪತ್ತಾಗಿದ್ದು ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲು ಆದ್ಯತೆ ನೀಡಬೇಕು ಅಂದರ ಬಾಳಿಗೆ ಬೆಳಕಾಗುವಂತಹ ಕಾರ್ಯ ಮಾಡುತ್ತಾ ಸಾಗಿರುವ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಮೇಲೆ ಶ್ರೀ ಖಾಸ್ಗತನ ಅನುಗ್ರಹವಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಜಯಪುರದ ಬಿ.ಎಂ.ಪಾಟೀಲ ವೈಧ್ಯಕೀಯ ಮಹಾ ವಿದ್ಯಾಲಯ ಹಾಗೂ ವಿಜಯಪುರ ಅನುಗ್ರಹ ವಿಜನ್ ಪೌಂಡೇಶನ್, ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂದತ್ವ ನಿವಾರಣೆ ಸಂಸ್ಥೆ ವಿಜಯಪುರ ಹಾಗೂ ಶ್ರೀ ಖಾಸ್ಗತೇಶ್ವರ ಮಠದ ಸಹಯೋಗದಲ್ಲಿ ಶನಿವಾರರಂದು ಶ್ರೀ ಖಾಸ್ಗತೇಶ್ವರ ಸಭಾ ಭವನದಲ್ಲಿ ಏರ್ಪಡಿಸಲಾದ ಶ್ರೀ ಖಾಸ್ಗತನ ಆರೋಗ್ಯ ಜಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಈ ಭಾಗದ ನೂರಕ್ಕೂ ಅಧಿಕ ಗ್ರಾಮಗಳ ಜನರು ಶ್ರೀ ಖಾಸ್ಗತ ಮಠದ ಭಕ್ತರಾಗಿದ್ದಾರೆ ಅವರ ಆರೋಗ್ಯ ಚೆನ್ನಾಗಿದ್ದರೆ ಶ್ರೀಮಠದ ಜಾತ್ರೆಯೂ ವೈಭವಪೂರಿತವಾಗಿ ಜರುಗಲಿದೆ ಎಂಬ ಕಾರಣದಿಂದ ಲಿಂ.ವಿರಕ್ತ ಮಹಾಸ್ವಾಮಿಗಳ ಆಶಯದಂತೆ ಸರ್ವ ರೋಗಿಗಳಿಗೂ ಒಂದೇ ಸೂರಿನಡಿ ಆರೋಗ್ಯ ತಪಾಸಣೆಯ ಜೊತೆಗೆ ಚಿಕೀತ್ಸೆ ಕೊಡಿಸಬೇಕೆಂಬ ಸದ್ದಿಚ್ಚೆಯೊಂದಿಗೆ ಈ ಭಾರಿಯ ಜಾತ್ರೋತ್ಸವದಲ್ಲಿ ಆರೋಗ್ಯ ಜಾತ್ರೆ ಎಂಬ ಹೆಸರಿನೊಂದಿಗೆ ಎಲ್ಲ ರೋಗಿಗಳಿಗೆ ತಪಾಸಣೆಗೋಸ್ಕರ ವಿಜಯಪುರದ ಬಿ.ಎಂ.ಪಾಟೀಲ ವೈಧ್ಯಕೀಯ ಮಹಾ ವಿದ್ಯಾಲಯ ಹಾಗೂ ಶ್ರೀ ಖಾಸ್ಗತ ಮಠದ ಭಕ್ತರಾದ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಜೊತೆಗೆ ಮಾತನಾಡಿದಾಗ ಸರ್ವ ರೋಗಿಗಳಿಗೆ ಉಚಿತವಾಗಿ ತಪಾಸಣೆ ಮ್ತು ಚಿಕೀತ್ಸೆ ಕೊಡಿಸುವಂತಹ ಕೆಲಸಕ್ಕೆ ಬಿ.ಎಂ.ಪಾಟೀಲ ವೈಧ್ಯಕೀಯ ಮಹಾ ವಿದ್ಯಾಲಯದ ಮುಖ್ಯಸ್ಥರೊಂದಿಗೆ ಚರ್ಚಿಸಿ ಶ್ರೀ ಮಠದ ಶ್ರೀ ಖಾಸ್ಗತಜ್ಜನ ಆರೋಗ್ಯ ಜಾತ್ರೆಗೆ ಸಹಕರಿಸಿದ್ದಾರೆ ಇದರ ಜೊತೆಗೆ ಸಾಕಷ್ಟು ಜನ ಯುವ ಸಮೂಹ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ ಈ ಶಿಬಿರದ ಆಯೋಜನೆಗೆ ಕೈ ಜೋಡಿಸಿದ ಡಾ.ಪ್ರಭುಗೌಡರ ಮೇಲೆ ಶ್ರೀ ಖಾಸ್ಗತನ ಅನುಗ್ರಹವು ಸದಾ ಇರಲಿದೆ ಎಂದರು.
ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಮಾತನಾಡಿ ಮನುಷ್ಯನಿಗೆ ಸಾಮಾನ್ಯವಾಗಿ ಆರೋಗ್ಯ ಕೆಡುವದು ಸಹಜ ಹಾಗೆಂದ ಮಾತ್ರಕ್ಕೆ ಆರೋಗ್ಯವನ್ನು ಯಾರೂ ನಿರ್ಲಕ್ಷೀಸಬಾರದು ಶ್ರೀ ಖಾಸ್ಗತೇಶ್ವರ ಮಠವು ಭಕ್ತರ ಪಾಲಿನ ಆಶಾಕಿರಣವಾಗಿದೆ ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿರುವ ಸಿದ್ದಲಿಂಗಶ್ರೀಗಳು ತಮ್ಮ ಮಠದ ಭಕ್ತರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವದರೊಂದಿಗೆ ಸರ್ವ ರೋಗಿಗಳಿಗೆ ಒಂದೇ ಸೂರಿನಡಿ ತಪಾಸಣೆಯ ಜೊತೆಗೆ ಚಿಕೀತ್ಸೆ ಕೊಡಿಸಲು ಶ್ರೀ ಖಾಸ್ಗತಜ್ಜನ ಆರೋಗ್ಯ ಜಾತ್ರೆಯನ್ನು ಹಮ್ಮಿಕೊಂಡು ಭಕ್ತರಿಗಾಗಿ ಶ್ರೀಮಠವು ಇದೆ ಎಂದು ತೋರಿಸಿಕೊಟ್ಟಿದ್ದಾರೆ ಈ ಹಿಂದೆ ಕೋವಿಡ್ ಸಮಯದಲ್ಲಿಯೂ ಕೂಡಾ ಗ್ರಾಮೀಣ ಭಾಗದ ೨೩ ಸಾವಿರ ಕುಟುಂಭಗಳಿಗೆ ಶ್ರೀಮಠದ ವತಿಯಿಂದ ದವಸ ದಾನ್ಯದ ಕಿಟ್ ನೀಡಿ ಅವರ ಹಸಿವು ತಣಿಸುವಂತಹ ಕೆಲಸ ಮಾಡಿದ್ದಾರೆ ಎಲ್ಲ ಭಕ್ತರಿಗೂ ಬಡವರಿಗೆ ಜಿಲ್ಲಾ ಕೇಂದ್ರ ಸ್ಥಳಗಳಲ್ಲಿರುವ ಆಸ್ಪತ್ರೆಗಳಿಗೆ ಬರಲು ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸರ್ವ ರೋಗಿಗಳಿಗೆ ಒಂದೇಡೆ ಸೇರಿಸಿ ಆರೋಗ್ಯ ಕಾಪಾಡುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದ ಅವರು ಅನುಗ್ರಹ ಆಸ್ಪತ್ರೆಯು ಲಕ್ಷಾಂತರ ಜನರಿಗೆ ಉಚಿತವಾಗಿ ನೇತ್ರ ಚೀಕಿತ್ಸೆಯನ್ನು ಮಾಡಿದೆ ಬಿ.ಎಂ.ಪಾಟೀಲ ವೈಧ್ಯಕೀಯ ಮಹಾವಿದ್ಯಾಲಯದ ಜೊತೆಗೆ ನಮ್ಮ ಆಸ್ಪತ್ರೆಯನ್ನು ತೊಡಗಿಸಿಕೊಂಡು ಬಡವರಿಗೆ ಅನುಕೂಲ ಕಲ್ಪಿಸುವಂತಹ ಕೆಲಸ ಮಾಡುತ್ತಾ ಸಾಗಿದ್ದೇವೆಂದರು.
ಈ ಆರೋಗ್ಯ ತಪಾಸಣೆಯಲ್ಲಿ ೩೫೦ ನೇತ್ರ ತಪಾಸಣೆ ೮೦ ಶಸ್ತç ಚೀಕೀತ್ಸೆಗೆ ಆಯ್ಕೆ ಮಾಡಲಾಯಿತು. ಬಿಎಲ್ಡಿಯಿಂದ ಇತರೆ ೩೦೦ ರೋಗಿಗಳಿಗೆ ತಪಾಸಣೆ ಕೈಗೊಳ್ಳಲಾಯಿತು. ಈ ಶಿಬಿರದಲ್ಲಿ ೪೫ ಜನರು ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಡಾ.ವ್ಹಿ.ಎಸ್.ಕಾರ್ಚಿ, ಡಾ.ನಜೀರ ಕೋಳ್ಯಾಳ, ಡಾ.ಎ.ಎ.ನಾಲಬಂದ, ಡಾ.ರವಿ ಅಗರವಾಲಾ, ಒಳಗೊಂಡು ಬಿ.ಎಂ.ಪಾಟೀಲ ವೈಧ್ಯಕೀಯ ಮಹಾ ವಿದ್ಯಾಲಯದ ವೈಧ್ಯರು, ಹಾಗೂ ಸಿಬ್ಬಂದಿಗಳು, ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
---
ಲಿಂ.ವಿರಕ್ತ ಮಹಾಸ್ವಾಮಿಗಳು ಹೊರಗಣ್ಣುಗಳಿಲ್ಲದಿದ್ದರೂ ಒಳಗಣ್ಣಿನಿಂದ ಎಲ್ಲವನ್ನು ಬಲ್ಲವರಾಗಿದ್ದರು ಸದಾ ಭಕ್ತರಿಗಾಗಿ ತಮ್ಮ ಹೃದಯ ಮಿಡಿತವನ್ನು ಬಯಸುತ್ತಿದ್ದ ವಿರಕ್ತಶ್ರೀಗಳ ಆಶಯದಂತೆ ಶ್ರೀ ಖಾಸ್ಗತಜ್ಜನ ಆರೋಗ್ಯ ಜಾತ್ರೆಯು ಯಶಸ್ವಿಕಂಡಿದೆ ಈ ಆರೋಗ್ಯ ಜಾತ್ರೆಗೆ ಕೈ ಜೋಡಿಸಿದ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞವೈಧ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಕಾರ್ಯ ಶ್ಲಾಘನೀಯವಾಗಿದೆ.
ಬಾಲ ಶಿವಯೋಗಿ ಸಿದ್ದಲಿಂಗಶ್ರೀ
ಶ್ರೀ ಖಾಸ್ಗತ ಮಠ ತಾಳಿಕೋಟೆ