ವಿಜಯಪುರ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದೆ : ಪಂ. ಶಫೀಕ್ಖಾನ

ವಿಜಯಪುರ : ಲಲಿತ ಕಲೆಗಳಲ್ಲಿಯೇ ಶ್ರೇಷ್ಠ ಕಲೆ ಸಂಗೀತ, ಮಾನಸಿಕ ನೆಮ್ಮದಿ ನೀಡುವ ನಮ್ಮ ಭಾರತೀಯ ಸಂಗೀತಕ್ಕೆ ವಿಶ್ವವೇ ಮನ್ನಣೆ ನೀಡಿದೆ. ವಿಜಯಪುರವು ಸಂಗೀತಕ್ಕೆ ಅಪಾರ ಕೊಡುಗೆ ನೀಡಿದೆ. ಆದಿಲಶಾಹಿ ಕಾಲದಲ್ಲಿ ನವರಸಪೂರ ಎಂಬ ಊರನ್ನೆ ಸಂಗೀತಕ್ಕಾಗಿ ಮೀಸಲಿರಿಸಲಾಗಿತ್ತು. ಮಹಿಪತಿ ದಾಸ, ಕೇಶವರಾವ ಥಿಟೆ, ಚನ್ನವೀರ ಬನ್ನೂರ, ಬಸಪ್ಪ ಹೇರಕಲರಂತಹ ಸಂಗೀತ ವಿದ್ವಾಂಸರು ವಿಜಯಪುರದಲ್ಲಿ ಸಂಗೀತಕ್ಕೆ ಹೊಸತನ ತಂದುಕೊಟ್ಟರು. ಪಂಡಿತ ಹೆರಕಲ್ ಅವರ ಶಿಷ್ಯರು ರಾಜ್ಯಾದ್ಯಂತ ಸಂಗೀತವನ್ನು ಪಸರಿಸುತ್ತಿರುವುದು ಒಳ್ಳೆಯ ಸಂಗತಿ ಎಂದು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ, ಆಕಾಶವಾಣಿ ಸಿತಾರ ವಾದಕ ಪಂಡಿತ ಶಫೀಕ್ಖಾನ ಹೇಳಿದರು.
ವಿಜಯಪುರದ ಸಂಗೀತ ವಿದ್ವಾನ್, ರಾಜ್ಯ ಪ್ರಶಸ್ತಿ ಪುರಸ್ಕೃತ, ಗಾನಶಿಲ್ಪಿ ದಿ|| ಪಂಡಿತ ಬಸಪ್ಪ ಹೆರಕಲ್ ಅವರ ೩೩ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಶಿಷ್ಯ ಬಳಗ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಇತಿಹಾಸದುದ್ದಕ್ಕೂ ಸಂಗೀತಕ್ಕೆ ವಿಶೇಷ ಸ್ಥಾನವನ್ನು ತಂದುಕೊಟ್ಟ ಶ್ರೇಯಸ್ಸು ವಿಜಯಪುರಕ್ಕೆ ಹಾಗೂ ಇಲ್ಲಿಯ ಕಲಾವಿದರಿಗೆ ಸಲ್ಲಿತ್ತದೆ. ರಾಷ್ಟç ಅಂತರರಾಷ್ಟಿçÃಯ ಕಲಾವಿದರು ಇಲ್ಲಿಯ ಸಂಗೀತಕ್ಕೆ ಗೌರವ ನೀಡುತ್ತಿದ್ದಾರೆ ಎಂದರು.
ಆಕಾಶವಾಣಿಯ ಇನ್ನೋರ್ವ ಸಿತಾರ ವಾದಕ ಪಂಡಿತ ರಫೀಕಖಾನ ಮಾತನಾಡಿದರು.
ಧಾರವಾಡ ಆಕಾಶವಾಣಿ ಎ-ಶ್ರೇಣಿ ಕಲಾವಿದೆ ಶ್ರೀಮತಿ ಸುಜಾತಾ ಗುರವ (ಕಮ್ಮಾರ) ಅವರು ಹಿಂದೂಸ್ತಾನಿ ಹಾಗೂ ಸುಗಮಸಂಗೀತವನ್ನು ಪ್ರಸ್ತುತ ಪಡಿಸಿದರು.
ರಾಷ್ಟಿçÃಯ ಕಲಾವಿದರಾದ ಪಂಡಿತ ಶಫೀಕಖಾನ ಹಾಗೂ ಪಂಡಿತ ರಫೀಕಖಾನ ಅವರ ದ್ವಂದ್ವ ಸಿತಾರ ವಾದನವು (ಜುಗಲಬಂದಿ) ಸಂಗೀತ ಕೇಳುಗರನ್ನು ಮಂತ್ರ ಮುಗ್ದಗೊಳಿಸಿದವು. ಯುವ ಕಲಾವಿದ ಮಾಸ್ತರ ಹೇಮಂತ ಜೋಶಿ ತಬಲಾ ಸಾಥ ನೀಡಿದರು. ಕಾಶೀನಾಥ ಭೋಸಲೆ ಹಾರ್ಮೋನಿಯಂ ಸಾಥ ನೀಡಿದರು. ರಾಜ್ಯ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಹಿರಿಯ ಗಮಕ ಗಾಯಕಿ ಹಾಗೂ ಹಿಂದೂಸ್ತಾನಿ ಕಲಾವಿದೆ ಶಾಂತಾಬಾಯಿ ಕೌತಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪಂಡಿತ ಬಸಪ್ಪ ಹೆರಕಲ್ರ ಶಿಷ್ಯ ಬಳಗ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು. ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಗಮಕ ವ್ಯಾಖ್ಯಾನಕಾರ ಕಲ್ಯಾಣರಾವ ದೇಶಪಾಂಡೆ, ಅಂತರರಾಷ್ಟಿçÃಯ ಶಹನಾಯಿ ವಾದಕ ಗಿರಿಮಲ್ಲಪ್ಪ ಭಜಂತ್ರಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸುಶೀಲೇಂದ್ರ ನಾಯಕ, ಹಿರಿಯ ಪತ್ರಕರ್ತ ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ, ಕರ್ನಾಟಕ ನಾಟಕ ಅಕಾಡೆಮಿಯ ನೂತನ ಸದಸ್ಯ ಶಶಿ ತಾವರಗೇರಿ, ವೃತ್ತಿ ರಂಗಭೂಮಿಯ ಕುರಿತು ಸಂಶೋಧನೆ ಮಾಡಿದ ಡಾ. ಸುಭಾಸಚಂದ್ರ ಕನ್ನೂರ, ಧ್ವನಿವರ್ಧಕ ತಂತ್ರಜ್ಞ ಹಫೀಜ್ ಮಕಾನದಾರ ಹಾಗೂ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ ಅಧ್ಯಕ್ಷ ಶ್ರೀಕಾಂತ ಕುಂದನಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕು. ಮಾಳವಿಕಾ ಜೋಶಿ ಪ್ರಾರ್ಥಿಸಿದರು. ನಂದಾ ಮಿರ್ಜಿ ಸ್ವಾಗತಿಸಿದರು. ಆಕಾಶವಾಣಿ ಕಲಾವಿದೆ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತೆ ಲತಾ ಜಹಾಗೀರದಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಪ್ರೊ. ಜಿ.ಎನ್. ದೇಶಪಾಂಡೆ ಪುರಸ್ಕೃತರನ್ನು ಪರಿಚಯಿಸಿದರು. ಮಾಧುರಿ ಕುಸಗಲ ವಂದಿಸಿದರು.