ಸಂಸ್ಥೆ ಮುದ್ರಣಾಲಯದಲ್ಲಿ ಯೋಗಾಸನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಯೋಗ ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮತೋಲನ ಕಂಡುಕೊಳ್ಳಬಹುದು ಎಂದು ಬಿ.ಎಲ್.ಡಿ.ಇ ಸಂಸ್ಥೆ ಸಹಾಯಕ ಕ್ರೀಡಾ ನಿರ್ದೇಶಕ ಕೈಲಾಸ ಹಿರೇಮಠ ಹೇಳಿದರು.
ಸಂಸ್ಥೆ ಮುದ್ರಣಾಲಯದಲ್ಲಿ ಅಂತರಾಷ್ರ್ಟೀಯ ಯೋಗ ದಿನಾಚರಣೆ ಅಂಗವಾಗಿ ಮುದ್ರಣಾಲಯದಲ್ಲಿ ಯೋಗಾಸನದಲ್ಲಿ ಮಾತನಾಡಿದ ಅವರು, ಆಧುನಿಕ ಕಾರ್ಯಗಳಲ್ಲಿ ತೊಡಗಿರುವ ಜನರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮತೋಲನ ಕಂಡುಕೊಳ್ಳಲು ಆಗುತ್ತಿಲ್ಲ. ಕಾರಣ ದಿನಂಪ್ರತಿ ಯೋಗದಿಂದ ಸಮತೋಲನ ಸಾಧ್ಯ. ಅಲ್ಲದೇ, ಏಕಾಗೃತೆ ಜೊತೆಗೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುದ್ರಣಾಲಯದ ಸಿಬ್ಬಂದಿ ಇದ್ದರು.