ಹಿರಿಯರ ತ್ಯಾಗದ ಪರಿಣಾಮ ರಾಜ್ಯಾಧ್ಯಕ್ಷನಾಗಲು ಸಾಧ್ಯ : ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ

Jul 28, 2025 - 23:53
 0
ಹಿರಿಯರ ತ್ಯಾಗದ ಪರಿಣಾಮ ರಾಜ್ಯಾಧ್ಯಕ್ಷನಾಗಲು ಸಾಧ್ಯ :  ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ
ನಿಡಗುಂದಿಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಚಂದ್ರಶೇಖರ ನುಗ್ಲಿ ಅಭಿಮಾನಿ ಬಳಗ ಹಮ್ಮಿಕೊಂಡ ನೂತತ ರಾಜ್ಯಾಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಅರ್ಜುನ್ ಲಮಾಣಿ ಸೇರಿದಂತೆ ಇತರರಿದ್ದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ


ನಿಡಗುಂದಿ : ಶಿಕ್ಷಕರ ಸಂಘದ ಬೆಳವಣಿಗೆ ಕಾರ್ಯ ಮಾಡಿರುವ ಹಲವಾರು ಹಿರಿಯರ ತ್ಯಾಗದ ಪರಿಣಾಮ ನಾನು, ಸಂಘದ ರಾಜ್ಯಾಧ್ಯಕ್ಷನಾಗಲು ಸಾಧ್ಯವಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಹೇಳಿದರು.

ಭಾನುವಾರ ನಿಡಗುಂದಿಯ ಕಮದಾಳ ಪುನರ್ವಸತಿ ಕೇಂದ್ರದ ಮುದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಡಗುಂದಿ ತಾಲೂಕು ಘಟಕ ಹಾಗೂ ಅಭಿಮಾನ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜೀವನ ಹಾಗೂ ದೇಹದಲ್ಲಿ ಜೀವ ಇರುವರೆಗೂ ಶಿಕ್ಷಕರ ಸೇವೆ ಮಾಡುತ್ತೇನೆ. ನನ್ನ ಬೆಳವಣಿಗೆಗೆ ಸಂಘದಲ್ಲಿ ಅನೇಕರು ಶಕ್ತಿಯನ್ನು ತುಂಬಿದ್ದಾರೆ. ಅವರ ನಂಬಿಕೆ ಪರಿಣಾಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಪಡೆದಿರುವೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆಯುತ್ತೇನೆ. ಹುದ್ದೆಗಳು ಜಾತಿ ಆಧಾರದಲ್ಲಿ ಸುಲಭವಾಗಿ ಸಿಗುತ್ತವೆ ಎನ್ನುವುದು ಸತ್ಯ. ಎಲ್ಲ ವ್ಯವಸ್ಥೆಗಳ ಮಧ್ಯ ತಮ್ಮೆಲ್ಲರ ಆಶೀರ್ವಾದ ಫಲವಾಗಿ ಸ್ಥಾನ ಲಭಿಸಿದೆ. ಸಿಎಂ ಸಿದ್ರಾಮಯ್ಯನವರು ರಾಜ್ಯದ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಜತೆಗಿದ್ದಾರೆ. ೬ನೇ ವೇತನ ಆಯೋಗದಲ್ಲಿ ಶೇ೩೦ರಷ್ಟು ಲಾಭವನ್ನು ಕೊಟ್ಟಿದ್ದಾರೆ. ೭ನೇ ವೇತನ ಆಯೋಗದಲ್ಲಿ ೧೦೫೦೮ ಕೋಟಿ, ಕಳೆದ ವೇತನ ಆಯೋಗದಲ್ಲಿ ಹತ್ತು ಸಾವಿರ ಕೋಟಿ ಕೊಟ್ಟಿದ್ದರು. ಭವಿಷ್ಯದಲ್ಲಿ ಡಿಗ್ರಿ ಮುಗಿಸಿದ ೫೮ ಸಾವಿರ ಜನರಿಗೆ ಒಂದು ಇನ್‌ಕ್ರಿಮೆಂಟ್ ಕೊಡಿಸುವಲ್ಲಿ ೧೩೦ ಕೋಟಿ ಹೊರೆಯಾಗುತ್ತದೆ. ಆದ್ರೂ ಆ ಕನಸನ್ನು ನನಸು ಮಾಡಿಸುವ ಪ್ರಯತ್ನ ಮಾಡುತ್ತೇನೆ. ಖಾಲಿ ಹುದ್ದೆಗಳು, ಬಿಸಿ ಊಟ, ಮೊಟ್ಟೆ ದರ ಏರಿಸುವುದು ಸೇರಿದಂತೆ ಶಿಕ್ಷಕರ ಹಲವಾರು ಸಮಸ್ಯೆಗಳ ಪರಿಹಾರದ ಜತೆಗೆ ಸರ್ಕಾರ ಮಕ್ಕಳಿಗೆ ಉಚಿತ ಸಮಸ್ತçದ ಹಾಗೂ ಪ್ರತಿ ಮಗುವಿಗೆ ಆರು ನೋಟ್ ಬುಕ್ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇನೆ. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿ ಶಾಲೆಯ ಶೌಚಾಲಯ ಸ್ವಚ್ಚತೆಗೊಳಿಸುವ ಕಾರ್ಯ ಮಾಡಿಸಬೇಕು. ತಾಲೂಕಿನ ಪ್ರತಿ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರರು ಹಾಗೂ ಅಭಿಮಾನಿಗಳ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಬಸವರಾಜ ಬಾಗೇನೂರ, ಅರ್ಜುನ್ ಲಮಾಣಿ, ಎಸ್.ಎಂ ಲೋಕನ್ನವರ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿ ಅಧಿಕಾರ ಪಡೆಯುವುದು ಸುಲಭದ ಮಾತಲ್ಲ. ಚಂದ್ರಶೇಖರ ನುಗ್ಲಿಯವರ ವಯಸ್ಸು ಚಿಕ್ಕದಾಗಿದ್ರೂ ಜಾತ್ಯಾತೀತವಾಗಿ ಬೆಳೆದು ಅಧಿಕಾರ ಪಡೆದುಕೊಂಡಿದ್ದಾರೆ. ಶಿಕ್ಷಕರ ಹತ್ತಾರು ಸಮಸ್ಯೆಗಳನ್ನು ನಿರಂತರವಾಗಿ ಪರಿಹಾರ ಮಾಡುತ್ತ ತಮ್ಮ ಜೀವನವನ್ನು ಶಿಕ್ಷಕರ ಸೇವೆಯಲ್ಲಿ ಕಳೆಯುತ್ತಿದ್ದಾರೆ. ಶಿಕ್ಷಕರ ಸಂಘದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿದ ಅವರು, ಸಂಘಟನಾ ಶಕ್ತಿ, ಎಲ್ಲರ ಪ್ರೀತಿಸುವ ಗುಣ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ಸಹಕಾರಿಯಾಗಿದೆ ಎಂದರು.

ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿ, ಸಂಘಟನಾ ಶಕ್ತಿಯ ಪರಿಣಾಮ ಹಳ್ಳಿಯ ಹುಡುಗ ರಾಜಧಾನಿಯಲ್ಲಿ ಸ್ಥಾನ ಪಡೆದದ್ದು ಹೆಮ್ಮೆ ತರಿಸಿದೆ. ಅವರಲ್ಲಿನ ಸಂಘಟನಾ ಶಕ್ತಿ ಹಾಗೂ ದೂರದೃಷ್ಟಿ ಇತರರಿಗೆ ಮಾದರಿಯಾಗಿದೆ. ಅವರ ಪ್ರಗತಿ ಪಥ ಮುನ್ನಡೆಯಲಿ. ರಾಷ್ಟçದ ಅಧ್ಯಕ್ಷರಾಗುವ ಎಲ್ಲ ಶಕ್ತಿ ಅವರ ಪಾಲಾಗಲಿ ಎಂದರು.

ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದ ಗೌಡರ, ಮಾಗಡಿ ಮೂರ್ತಿ, ಶಹಂಶಾದ್ ಬೇಗಂ ಕನಕಗಿರಿ, ಮಗದುಮ್ ಮುಲ್ಲಾ, ಪ.ಪಂ ಸದಸ್ಯ ಶಿವಾನಂದ ಮುಚ್ಚಂಡಿ, ಎಂ.ಎ0 ಮುಲ್ಲಾ, ಸಂಗಮ, ಎಂ.ಎಸ್ ಮುಕಾರ್ತಿಹಾಳ, ಸಲಿಂ ದಡೇದ, ಚಂದ್ರಶೇಖರ ಕೋಳೇಕರ, ಮಹೇಶ ಗಾಳಪ್ಪಗೋಳ, ಪ.ಪಂ ಸದಸ್ಯ ಕರಿಯಪ್ಪ ಸಿಂದಗಿ, ಹನಮಂತ ಮಾಳಗೊಂಡ ಇತರರಿದ್ದರು.

ನಿಡಗುಂದಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿ0ದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿಯವರಿಗೆ ಅದ್ಧೂರಿ ಸನ್ಮಾನ ನಡೆಸಲಾಯಿತು. ವೇದಿಕೆಯಲ್ಲಿ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಗಣ್ಯರು ಸನ್ಮಾನಿಸಿದರು.


ರಾಜ್ಯಾಧ್ಯಕ್ಷ ಸ್ಥಾನ ಪಡೆದು ಪ್ರಥಮ ಬಾರಿಗೆ ನಿಡಗುಂದಿಗೆ ಆಗಮಿಸುತ್ತಿರುವ ಹಿನ್ನಲೆ ತೆರೆದ ವಾಹನದಲ್ಲಿ ಹೊಸಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.  


ಜೀವನದಲ್ಲಿ ಅಧಿಕಾರ ಅಂತಸ್ತು ಶಾಶ್ವತವಲ್ಲ. ನಿತ್ಯ ನಮಗೆ ಅನ್ನ ನೀಡುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಆದರ್ಶಗಳನ್ನು ಬೆಳೆಸಬೇಕು. ಮಕ್ಕಳನ್ನು ದೇವರಂತೆ ಕಂಡು ಪ್ರಾಮಾಣಿಕ ಸೇವೆ ಮಾಡಿದ್ದಲ್ಲಿ ನಮ್ಮ ಮಕ್ಕಳಿಗೂ ಅದರ ಪುಣ್ಯ ತಟ್ಟುವುದು ಶತಸಿದ್ಧವಾಗಲಿದೆ. ವರ್ಗಾವಣೆಗೊಂಡಾಗ ಮಕ್ಕಳು ಶಿಕ್ಷಕರಿಗೆ ಹೋಗಬೇಡಿ ಎಂದರೆ, ಶಿಕ್ಷಕರ ಜನ್ಮ ಸಾರ್ಥಕವಾದಂತೆ.
ಜಿ.ಎ0 ಹಿರೇಮಠ ಶಿಕ್ಷಕ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.