ಸಿದ್ದಗಂಗಾಕ್ಕೆ ವಿಶ್ವ ಮನ್ನಣೆ ತಂದುಕೊಟ್ಟ ಮಹಾನ ಸಂತ ಶಿವುಕುಮಾರ ಶ್ರೀ

ಸುರಪುರ : ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದುಕೊಟ್ಟ ತ್ರಿವಿಧ ದಾಸೊಹಿಗಳು ಹಾಗೂ ಸಿದ್ದಗಂಗಾ ಮಠದ ಪೀಠಾಧಿಪತಿಗಳಾಗಿದ್ದ ಡಾ|| ಶಿವಕುಮಾರ ಮಹಾಸ್ವಾಮಿಜಿಗಳು ರಾಷ್ಟçಕಂಡ ಮಹಾನ್ ಸಂತ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ಸುರಪುರದ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕ ಘಟಕ ಹಾಗೂ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ. ಶ್ರೀ. ಶಿವಕುಮಾರ ಮಹಾಸ್ವಾಮಿಜಿಗಳ ೬ ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಿದ್ದಗಂಗಾ ಶ್ರೀಗಳು ರಾಷ್ಟçಕಂಡ ಅಪರೂಪದ ಸಂತ, ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪನವರು ಪೂಜ್ಯ ಸಿದ್ದಗಂಗಾ ಶ್ರೀಗಳ ಶತಮಾನೋತ್ಸವ ಸಂದರ್ಭದ “ಸಾಮಗಾನದಗಾನ” ಸ್ಮರಣ ಸಂಚಿಕೆಯಲ್ಲಿ ಪೂಜ್ಯರನ್ನು ಕುರಿತು ಹಿಗೆ ಬರೆಯುತ್ತಾರೆ, ಸದ್ದು ಗದ್ದಲ ವಿರದ ಸಾಧನೆ ಇಂದು ಗದ್ದುಗೆಗೆ ಎರಿದೆ, ಕಾಯಕವೇ ಕೈಲಾಸ ಎಂಬ ಮಾತು ಇಲ್ಲಿ ಕೃತಿಯೊಳು ಮೂಡಿದೆ. ಕಾವಿಯ ಊಡಿಗೆಯನುಟ್ಟ ನಭವೆ ಕಿರಣ ಹಸ್ತವ ಚಾಚಿದೆ, ಎಲ್ಲಾ ತನ್ನವರೆನ್ನುವ ಭಾವದಿ ಕರುಣೆಯ ಕಣ್ ತೆರೆದಿದೆ ಎಂದು ಬರೆಯುತ್ತಾರೆ. ಅನ್ನ, ಅಕ್ಷರ, ಅರಿವೆಯ ಜೊತೆಗೆ ಅರಿವಿನ ಕಲ್ಪನೆಯನ್ನು ಕೊಟ್ಟು ಈ ನಾಡಿನ ಲಕ್ಷಾಂತರ ಯುವಜನರಿಗೆ ಸಂಸ್ಕಾರದ ದಿಕ್ಷೆಯನ್ನು ಕೊಟ್ಟು ಜಾತಿ, ಮತ, ಪಂತಗಳನ್ನು ಮೀರಿ ಬಸವಣ್ಣನವರ ಕಾಯಕ ಶಬ್ದಕ್ಕೆ ನಿಜಾಥÀðದ ಗೌರವ ತಂದುಕೊಟ್ಟ ಮಹಾನ್ ಸಂತ ಡಾ|| ಶಿವಕುಮಾರ ಮಹಾಸ್ವಾಮಿಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ, ಬಸನಗೌಡ ಪಾಟೀಲ್ ದೇವಾಪೂರ, ಶಿವನಗೌಡ ಸೂಗುರು, ಪ್ರಮುಖರಾದ ವಿರೇಶ ನಿಷ್ಠಿ ದೇಶಮುಖ, ಸಿದ್ದನಗೌಡ ಹೆಬ್ಬಾಳ, ಪ್ರದೀಪ ಕದರಾಪುರ, ರವಿಗೌಡ ಹೆಮನೂರು, ಪ್ರಕಾಶ ಅಂಗಡಿ ಹೆಮ್ಮಡಗಿ, ಮಲ್ಲು ಮುದೋಳ, ನೀಲಾಂಬಿಕೆ ಸಿದ್ದನಗೌಡ ಹೆಬ್ಬಾಳ, ಸುನೀತಾ ಸಿದ್ದನಗೌಡ ದೇವಾಪೂರ, ಅನಪೂರ್ಣ ಜಕರೆಡ್ಡಿ, ಜಯಶ್ರೀ ಹಾಗೂ ಗುರುನಾಥರೆಡ್ಡಿ ಶಿಲವಂತ, ಬಸ್ಸು ಹಡಪಾದ, ವೆಂಕಟೇಶ, ಮಹೇಶ ಶಾಬಾದಿ ಸೇರಿದಂತೆ ಇತರರಿದ್ದರು.