ವೀರಶೈವ ಮಹಾಸಭೆ ಕ್ರೀಯಾಶಿಲವಾಗಿ ಸಂಘಟಿಸಿ : ಡಾ.ಶಂಕರ ಬಿದರಿ

Jan 30, 2025 - 22:50
Jan 30, 2025 - 23:55
 0
ವೀರಶೈವ ಮಹಾಸಭೆ ಕ್ರೀಯಾಶಿಲವಾಗಿ ಸಂಘಟಿಸಿ : ಡಾ.ಶಂಕರ ಬಿದರಿ

ಸುರಪುರ : ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕ್ರೀಯಾಶೀಲವಾಗಿ ಸಂಘಟಿಸುವ ಮೂಲಕ ಯುವಕರಿಗೆ ಸಮಾಜದ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಡಾ. ಶಂಕರ ಬಿದರಿ ಹೇಳಿದರು.                

ಸುರಪುರ ವೀರಶೈವ ಮಹಾಸಭೆಯ ಕಾರ್ಯಲಯಕ್ಕೆ ಆಗಮಿಸಿದ ಅವರನ್ನು ಮಹಾಸಭೆ ತಾಲೂಕ ಘಟಕದಿಂದ ಆಯೋಜಿಸಿದ್ದ ಸನ್ಮಾನ ಸ್ವಿಕರಿಸಿ ಮಾತನಾಡಿದರು.             

ಶತಮಾನದ ಇತಿಹಾಸವಿರುವ ಅಖಿಲ ಭಾರತ ವೀರಶೈವ ಮಹಾಸಭೆಯು ಹಾನಗಲ್ಲದ ಗುರುಕುಮಾರ ಶಿವಯೋಗಿಗಳು ಸ್ಥಾಪಿಸಿದ್ದು, ಸಮಾಜದ ಏಳಿಗೆ ಮತ್ತು ಬೆಳವಣಿಗೆಗಾಗಿ ಸರ್ವರು ಶ್ರಮಿಸಬೇಕು ಆ ದಿಶೆಯಲ್ಲಿ ಹೆಚ್ಚು ಯುವಕರನ್ನು ಸಮಾಜಮುಖಿಯಾಗಿ ಸಂಘಟಿಸುವ ಮೂಲಕ ಮಹಾಸಭೆಯ ಸದಸ್ಯತ್ವ ನೀಡಿ ಕ್ರೀಯಾಶೀಲಗೊಳಿಸಬೇಕು ಎಂದು ಸಲಹೆ ನೀಡಿದರು. ಬರುವ ದಿನಗಳಲ್ಲಿ ಮಹಾಸಭೆಯ ಮೂಲಕ ಪ್ರತಿ ಜಿಲ್ಲಾ ಮತ್ತು ತಾಲೂಕುಗಳಲ್ಲೂ ವೀರಶೈವ ಲಿಂಗಾಯತ ಭವನ ಸ್ಥಾಪನೆ, ಬಡ ವಿಧ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದು, ವಿಧ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಪ್ರಾರಂಭ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.                 

ಮಹಾಸಭೆಯ ಸುರಪುರ ತಾಲೂಕ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಸುರಪುರ ತಾಲೂಕಿನ ಮಹಾಸಭೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು ಹಾಗೂ ತಾಲೂಕ ವೀರಶೈವ ಸಮಿತಿಯ ಅಧ್ಯಕ್ಷ ಡಾ. ಸುರೇಶ ಆರ್. ಸಜ್ಜನ್ ಸುರಪುರ ತಾಲೂಕ ವೀರಶೈವ ಲಿಂಗಾಯತ ಸಮಿತಿಯ ಚಟುವಟಿಕೆಗಳ ಕುರಿತು, ಬಸವೇಶ್ವರ ಪತ್ತಿನ ಸಹಕಾರಿ ಸಂಘ, ವೀರಶೈವ ಕಲ್ಯಾಣ ಮಂಟಪ ಸೆರಿದಂತೆ ಇತರೆ ಮಾಹಿತಿ ನೀಡಿದರು.                 

ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಜಮದ್ರಖಾನಿ, ಮಲ್ಲಣ್ಣ ಸಾಹುಕಾರ ಮುಧೋಳ, ಸುಗೂರೇಶ ವಾರದ, ಸಂಗಣ್ಣ ಏಕ್ಕೆಳ್ಳಿ, ವೀರೆಶ ನಿಷ್ಠಿ ದೇಶಮುಖ, ಮಂಜುನಾಥ ಜಾಲಹಳ್ಳಿ, ಶಿವಶರಣಪ್ಪ ಹೆಡಗಿನಾಳ, ಅಮರಯ್ಯ ಸ್ವಾಮಿ ಕಡ್ಲೆಪ್ಪ ಮಠ, ಜಗದೀಶ ಪಾಟೀಲ ಸೂಗುರು, ಚನ್ನಪ್ಪಗೌಡ ದೇವಾಪೂರ, ಪ್ರಕಾಶ ಹೆಮ್ಮಡಗಿ, ಶರಣಯ್ಯ ಶ್ರೀಗಿರಿಮಠ, ಸಿದ್ಧನಗೌಡ ಹೆಬ್ಬಾಳ, ಮಲ್ಲು ಬಾದ್ಯಾಪೂರ, ಸಿದ್ಧಲಿಂಗರೆಡ್ಡಿ, ಸಿದ್ಧನಗೌಡ ಪಾಟೀಲ ದೇವಾಪೂರ ಸೇರಿದಂತೆ ಇತರರಿದ್ದರು.             

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.