ತುಷಾರ್ ಚಿತ್ರಕ್ಕೆ ಬೆಸ್ಟ್ ಟೆಲಿ ಫೀಲಂ ಅವಾರ್ಡ

ವಿಜಯಪುರ : ಕನ್ನಡ ಚಿತ್ರರಂಗದ ಹೆಸರಾಂತ ಸಿನಿಮಾ ಪತ್ರಿಕೆ "ಚಿತ್ರ ಸಂತೆ" ಪತ್ರಿಕೆ ಆಯೋಜಿಸಿರುವ ಚಿತ್ರ ಸಂತೆ ಚಲನಚಿತ್ರೋತ್ಸವದಲ್ಲಿ ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ನಟಿಸಿ ನಿರ್ದೇಶಿಸಿರುವ ತುಷಾರ್ ಟೆಲಿಫೀಲಂಗೆ "ಬೆಸ್ಟ್ ಕನ್ನಡ ಟೆಲಿ ಫೀಲಂ ಅವಾರ್ಡ" ದೊರೆತಿದೆ.
ಗುರುವಾರ ಬೆಂಗಳೂರಿನ ಹೈದೆಹಿ ಪಾರ್ಕ್ ಹೊಟೆಲ್ ನಲ್ಲಿ ಜರುಗಿದ ಚಲನಚಿತ್ರೋತ್ಸವದಲ್ಲಿ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಪಡ್ಡೆಹುಲಿ ಸಿನಿಮಾ ಖ್ಯಾತಿಯ ನಟ ಶ್ರೇಯಸ್ ಕೆ ಮಂಜು ಹಾಗೂ ಚಿತ್ರ ಸಂತೆ ಸಂಪಾದಕ ಗಿರೀಶ ವಿ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಚಲನಚಿತ್ರೋತ್ಸವದಲ್ಲಿ ನಿರ್ಮಾಪಕ ಗಂಡುಗಲಿ ಕೆ ಮಂಜು, ನಟಿ ಅಂಬಾಲಿ ಭಾರತಿ, ಪ್ರಜ್ಞಾ ಫೌಂಡೇಶನ್ ಅಧ್ಯಕ್ಷ ಡಾ.ಮಹೇಶ ಅರವಿಂದ, ನಟಿ ನಂದಿನಿ ರಾಮಯ್ಯ ವೇದಿಕೆ ಮೇಲಿದ್ದರು. ಭೂಮಿಕಾ ಅವರು ನಿರೂಪಿಸಿ ವಂದಿಸಿದರು.