ನಿಗಮಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
Dr. B.R. Ambedkar Development Corporation invites applications for various projects

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಅದಿಜಾಂಬವ, ಭೋವಿ, ಸಫಾಯಿ ಕರ್ಮಚಾರಿ, ಮತ್ತು ತಾಂಡಾ ಅಭಿವೃದ್ಧಿ ನಿಗಮಗಳು 2025-26ನೇ ಸಾಲಿನ ಅನೇಕ ಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿವೆ.
ಯೋಜನೆಗಳ ಪಟ್ಟಿ:
- ಸ್ವಯಂ ಉದ್ಯೋಗ ನೇರಸಾಲ – ಕುರಿ ಸಾಕಾಣಿಕೆ
- ಸ್ವಾವಲಂಬಿ ಸಾರಥಿ
- ಪುಡ್ ಕಾರ್ಟ್ (ಮೊಬೈಲ್ ಕಿಚನ್)
- ಉದ್ಯಮಶೀಲತಾ ಅಭಿವೃದ್ಧಿ ಯೋಜನೆ
- ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ
- ಗಂಗಾ ಕಲ್ಯಾಣ & ಭೂ ಒಡೆತನ ಯೋಜನೆ
ಕೊನೆಯ ದಿನಾಂಕ: 10-09-2025
•ಅರ್ಜಿ ಸಲ್ಲಿಸುವ ಮಾರ್ಗಗಳು:
- ಕರ್ನಾಟಕ ಒನ್
- ಗ್ರಾಮ ಒನ್
- ಸೇವಾ ಸಿಂಧು ಪೋರ್ಟಲ್
2023-24 ಅಥವಾ 2024-25ರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಮರುಅರ್ಜಿಯ ಅಗತ್ಯವಿಲ್ಲ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ :08352-276743 ಸಂಪರ್ಕಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.