ಪದ್ಮಾಂಜಲಿ ಸ್ಕೂಲ್ : ಅಂತರಾಷ್ಟಿçÃಯ ಯೋಗ ದಿನಾಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ನಗರದ ಪದ್ಮಾಂಜಲಿ ಸ್ಕೂಲ್ಸ್ , ವಿಜಯಪುರದಲ್ಲಿ ೧೧ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಧ್ಯಾನದೊಂದಿಗೆ ಉತ್ಸವದ ರೀತಿಯಲ್ಲಿ ಆಚರಿಸಲಾಯಿತು.
ಈ ವಿಶೇಷ ಕಾರ್ಯಕ್ರಮ ಶಾಲೆಯ ಮುಖ್ಯ ಗುರುಗಳು ಉದ್ಘಾಟಿಸಿದರು. ಹಾಗೂ ಎಲ್ಲ ಶಿಕ್ಷಕ ಸಿಬ್ಬಂಧಿ ಸಹಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಲೋಕೇಶ ಹೊಸಟ್ಟಿಯವರು “ಯೋಗವು ದೈಹಿಕ & ಮಾನಸಿಕ ಆರೋಗ್ಯಕ್ಕೆ ಅತಂತ್ಯ ಪ್ರಮುಖವಾಗಿದೆ. ಇದು ದೇಹ ಮತ್ತು ಮನಸ್ಸನ್ನು ಸದೃಢವಾಗಿರುಸುವ ಮೂಲಕ ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ಹಾಗೂ ಏಕ್ರಾಗತೆ ಮತ್ತು ಮನ ಶಾಂತಿಯನ್ನು ಹೆಚ್ಚಿಸುತ್ತದೆ”. ಎಂದು ಹೇಳಿದರು.
ದೈಹಿಕ ಶಿಕ್ಷಕರಾದ ಸಂಜು ಕೋಳಕರವರು ವಿದ್ಯಾರ್ಥಿಗಳಿಗೆ ಯೋಗಾಸನದ ವಿವಿಧ ಭಂಗಿಗಳ ಪ್ರಾತಕ್ಷೆ ನೀಡಿದರು. ಈ ಮೂಲಕ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಅಭ್ಯಾಸ ಮಾಡುವ ಅವಕಾಶವನ್ನು ಪಡೆದರು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಶೀಲಾ ಮೋರಟಗಿಯವರು ನಡೆಸಿಕೊಟ್ಟರು.
ವಂದನಾರ್ಪಣೆ ಮಧು ಪೂಜಾರಿ ಶಿಕ್ಷಕರು ನೇರವರಿಸಿದರು.