ಮಹಿಳೆಯರ ತವಕ ತಲ್ಲಣಗಳಿಗೆ ಧ್ವನಿಯಾದ ಬಾನು ಮುಷ್ತಾಕ : ಡಿವೈಎಸ್ಪಿ ಬಸವರಾಜ ಯಲಿಗಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಕನ್ನಡಕ್ಕೆ ಪ್ರಥಮ ಬೂಕರ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಜಗತ್ತಿನಾದ್ಯಂತ ಕನ್ನಡ ಭಾಷೆಯ ಕೀರ್ತಿಯನ್ನು ಪಸರಿಸುವ ಮೂಲಕ ಕನ್ನಡದ ಘನತೆಯನ್ನು ಬಾನು ಮುಷ್ತಾಕ ಹೆಚ್ಚಿಸಿದ್ದಾರೆ ಎಂದು ನಗರದ ಡಿವೈಎಸ್ಪಿ ಮತ್ತು ಸಾಹಿತಿ ಬಸವರಾಜ ಯಲಿಗಾರ ಹೇಳಿದರು.
ಅವರು ಇಲ್ಲಿನ ಅಂಜುಮನ-ಇ-ಇಸ್ಲಾಮ್ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಚಕೋರ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕನ್ನಡ ಭಾಷೆಯ ಸಿರಿತನ ಹಿರಿದು, ಕನ್ನಡದಲ್ಲಿ ಮಹಿಳೆಯರ ನೋವು, ಸಂಕಟಗಳಿಗೆ ಬಾನು ಮುಷ್ತಾಕ್ ತಮ್ಮ ಎದೆಯ ಹಣತೆ ಕೃತಿಯಲ್ಲಿ ಮಾನವೀಯ ಮೂಲಕ ಸ್ಪಂದಿಸಿದ್ದಾರೆ. ಸಾವಿರಾರು ಸಂಕಟಗಳನ್ನು ಸಮರ್ಥವಾಗಿ ಎದುರಿಸಿ ಕೃತಿ ರಚಿಸಿದ್ದಾರೆ. ತನ್ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದರು.
‘ಎದೆಯ ಹಣತೆ’ ಹಚ್ಚಿದ ಬಾನು ಮುಸ್ತಾಕ್ ಎಂಬ ವಿಷಯದ ಕುರಿತು ಇಲಕಲ್ಲನ ಲೇಖಕಿ ಮುರ್ತುಜಾಬೇಗಂ ಕೊಡಗಲಿ ಮಾತನಾಡಿ ಜೀವಕ್ಕೆ ಬಂದ ಅಪಾಯಗಳನ್ನು ಮೆಟ್ಟಿನಿಂತು ಸಮಾಜದಲ್ಲಿ ಮಹಿಳೆಯರು ಪುರುಷ ಪ್ರಾಧಾನ್ಯತೆಯಿಂದ ಅನುಭವಿಸುತ್ತಿದ್ದ ಸಾವಿರಾರು ಸಂಕಟಗಳಿಗೆ ಸಮರ್ಥವಾಗಿ ಸ್ಪಂದಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಪರಕೀಯ ಪ್ರಭಾವದಿಂದ ಯಜಮಾನತೆಯಿಂದ ಬಡತನದಿಂದ ಕಂಗೆಡುವ ಬದುಕಿನ ಕಟು ವಾಸ್ತವ ಸತ್ಯಗಳನ್ನು ತಮ್ಮ ಕಥೆಗಳಲ್ಲಿ ಸಹಜವಾಗಿ ಅನಾವರಣಗೊಳಿಸಿದ್ದಾರೆ. ವಿಶ್ವಕ್ಕೆ ಶ್ರೇಷ್ಠ ಕೃತಿಯನ್ನು ಕಟ್ಟಿಕೊಡುವ ಮೂಲಕ ಕನ್ನಡದ ಹಿರಿಯನ್ನು ಹೆಚ್ಚಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಕ್ಸಲಂಟ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿಯೂ ಕೂಡ ಕೆಲವು ಪೂರ್ವಾಗ್ರಹಗಳ ಹಿಡಿತದಲ್ಲಿ ಸಮಾಜದ ಕೆಳಸ್ತರದ ಮಹಿಳೆಯರ ಬದುಕು ಇನ್ನೂ ಸಾವಿರಾರು ಸಂಕಟಗಳಿAದ ನಲುಗುತ್ತಿದೆ. ಇಂತಹ ಮಹಿಳೆಯರ ಬದುಕಿಗೆ ಬೆಳಕು ನೀಡುವ ದಿಸೆಯಲ್ಲಿ ಬಾನು ಮುಷ್ತಾಕ್ ಅವರ ಕಥೆಗಳು ತೋರು ದೀಪದಂತಿವೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು ಜಾಗತಿಕರಣದ ಪ್ರಭಾವದಿಂದ ನಮ್ಮ ನೆಲದ ಶ್ರೇಷ್ಠ ಸಂಸ್ಕೃತಿಗಳು ಆಚಾರ-ವಿಚಾರಗಳು ನೇಪಥ್ಯಕ್ಕೆ ಜಾರುತ್ತಿದೆ. ಅವೆಲ್ಲವುಗಳನ್ನು ಮತ್ತೆ ಮುನ್ನೆಲೆಗೆ ತಂದು ಸ್ವಸ್ಥ ಬದುಕನ್ನು ಕಟ್ಟಬೇಕಾದ ತುರ್ತಿದೆ. ಇದಕ್ಕೆ ಸಾಹಿತ್ಯ ಮಾತ್ರ ಪರಿಹಾರವಾಗಿದ್ದು ಅಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಳ್ಳುತ್ತಿದೆ ಎಂದರು.
ಸಾಹಿತಿ ಶಂಕರ ಬೈಚಬಾಳ ಮಾತನಾಡಿ ಒಂದು ವ್ಯವಸ್ಥೆಯ ಹಿಂದಿರುವ ಕಂದಕಗಳನ್ನು ನೋವುಗಳನ್ನು ಮೌನಮುರಿದು ಕಥೆಕಟ್ಟುವ ಮೂಲಕ ಸ್ವಸ್ಥ ಸಮಾಜಕ್ಕೆ ಬಾನುಮುಸ್ತಾಕ್ ಮುನ್ನುಡಿ ಬರೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಅ0ಜುಮನ ಶಿಕ್ಷಣ ಮಹಾವಿದ್ಯಾಲಯ ಚೇರಮನ್ನರಾದ ಅಲ್-ಹಜ್ ಜನಾಬ ಸಜ್ಜಾದೆ ಪೀರಾ ಮುಶ್ರೀಫ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ ಡಾ. ಶಾರದಾಮಣಿ ಎಸ್. ಹುಣಶ್ಯಾಳ, ಸಂಸ್ಥೆಯ ಸದಸ್ಯ ಜೈನುಲದ್ದೀನ್, ಸಾಹಿತಿಗಳಾದ ಸಿದ್ರಾಮ ಬಿರಾದಾರ, ಸುನಂದಾ ಗುಡದೂರ, ಮೋಹನ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಮನು ಪತ್ತಾರ, ಸತೀಶ ಹೊನ್ನುಂಗರ, ಸಂಜೀವ ಪುರೋಹಿತ, ಡಿ. ಜೋಸೆಫ್, ಸುಭಾಸ ಯಾದವಾಡ ಮುಂತಾದವರು ಉಪಸ್ಥಿತರಿದ್ದರು.
‘ಎದೆಯ ಹಣತೆ’ ಹಚ್ಚಿದ ಬಾನು ಮುಸ್ತಾಕ್ ಎಂಬ ವಿಷಯದ ಕುರಿತು ಇಲಕಲ್ಲನ ಲೇಖಕಿ ಮುರ್ತುಜಾಬೇಗಂ ಕೊಡಗಲಿ ಮಾತನಾಡಿ ಜೀವಕ್ಕೆ ಬಂದ ಅಪಾಯಗಳನ್ನು ಮೆಟ್ಟಿನಿಂತು ಸಮಾಜದಲ್ಲಿ ಮಹಿಳೆಯರು ಪುರುಷ ಪ್ರಾಧಾನ್ಯತೆಯಿಂದ ಅನುಭವಿಸುತ್ತಿದ್ದ ಸಾವಿರಾರು ಸಂಕಟಗಳಿಗೆ ಸಮರ್ಥವಾಗಿ ಸ್ಪಂದಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಪರಕೀಯ ಪ್ರಭಾವದಿಂದ ಯಜಮಾನತೆಯಿಂದ ಬಡತನದಿಂದ ಕಂಗೆಡುವ ಬದುಕಿನ ಕಟು ವಾಸ್ತವ ಸತ್ಯಗಳನ್ನು ತಮ್ಮ ಕಥೆಗಳಲ್ಲಿ ಸಹಜವಾಗಿ ಅನಾವರಣ ಗೊಳಿಸಿದ್ದಾರೆ. ವಿಶ್ವಕ್ಕೆ ಶ್ರೇಷ್ಠ ಕೃತಿಯನ್ನು ಕಟ್ಟಿಕೊಡುವ ಮೂಲಕ ಕನ್ನಡದ ಹಿರಿಯನ್ನು ಹೆಚ್ಚಿಸಿದ್ದಾರೆ.
-ಬಸವರಾಜ ಯಲಿಗಾರ
ಡಿವೈಎಸ್ಪಿ ಮತ್ತು ಸಾಹಿತಿ