ಭಾಜಪ ವತಿಯಿಂದ ಬಿಎಸ್ವೈ ಹುಟ್ಟುಹಬ್ಬ ಆಚರಣೆ

ವಿಜಯಪುರ : ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ವಿಜಯಪುರದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ವಿಜಯಪುರ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಹುಟ್ಟುಹಬ್ಬ ಆಚರಿಸಿದರು. ಬಳಿಕ ಸಿದ್ದೇಶ್ವರ ದೇವಸ್ಥಾನದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ರಾಜಾಹುಲಿ ಯಡಿಯೂರಪ್ಪ ಎಂದು ಘೋಷಣೆ ಕೂಗಿ ಶುಭಾಶಯಕೋರಿದರು. ಈ ವೇಳೆ ಮುಖಂಡರಾದ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ದು ಮಲ್ಲಿಕಾರ್ಜುನ್ ಮಠ ,ಜಗದೀಶ್ ಮುಚ್ಚಂಡಿ, ರಾಜೇಶ್ ತಾವುಸೆ, ಶರತ್ ಬಿರಾದರ್, ಸಂಪತ್ ಕೋವಳಿ, ಆನಂದ್ ಮುಚಂಡಿ ವಿನಾಯಕ್ ದಹಿಂದೆ, ಸಾಗರ ಅಡಕಿ, ಸುರೇಶ್ ಮರಿಗುದ್ದಿ, ಗುರುರಾಜ್ ಗುಲಗೇರಿ, ನಿಖಿಲ್ ಮ್ಯಾಗೇರಿ, ಅನಿಲ್ ಉಪ್ಪಾರ್, ವೀರೇಶ್ ಮಾದನ್ ಶೆಟ್ಟಿ, ಮಂತನ್ ಗಾಯಕವಾಡ್, ಸತೀಶ್ ಬಿಜ್ಜರಗಿ, ರಾಮಚಂದ್ರ ಚವಾಣ್, ಲಕ್ಷ್ಮಣ ಮಾನೆ, ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.