ಅಂಬಿಗೇರ ಚೌಡಯ್ಯನವರ ಆದರ್ಶ ಮೈಗೂಡಿಸಿಕೊಳ್ಳಬೇಕಿದೆ-ಜಾಧವ

ತಾಳಿಕೋಟೆ, ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವದರೊಂದಿಗೆ ಸಮಾನತೆಯ ಹಾದಿಯನ್ನು ತೋರಿಸಿಕೊಟ್ಟವರಾಗಿದ್ದಾರೆ ಅವರ ಆದರ್ಶಗಳು ಇಂದಿಗೂ ಪ್ರಸ್ಥುತವಾಗಿವೆ ಎಂದು ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಿಜ ಶರಣ ಅಂಬಿಗೇರ ಚೌಡಯ್ಯನವರ ಜಯಂತ್ಯೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ಹಾರ ಹಾಕಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅಂಬಿಗೇರ ಚೌಡಯ್ಯನವರು ಬಸವಣ್ಣನವರ ಸಮಕಾಲಿನವರಾಗಿದ್ದಾರೆ ಅವರು ವಚನಗಳ ಮೂಲಕ ದಾರಿ ತೋರಿಸಿದ್ದಾರೆ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವದರೊಂದಿಗೆ ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣವೆಂದರು.
ಈ ಸಮಯದಲ್ಲಿ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜದ ಅಧ್ಯಕ್ಷ ರಮೇಶ ಮೂಕೀಹಾಳ, ಪುರಸಭಾ ಸದಸ್ಯ ಪರಶುರಾಮ ತಂಗಡಗಿ, ಶಶಿಕಾಂತ ಮೂಕೀಹಾಳ, ಭೀಮಣ್ಣ ತಳವಾರ, ಲಕ್ಷö್ಮಣ ತಳವಾರ, ಬಸವರಾಜ ಯಡಹಳ್ಳಿ, ಪರಶುರಾಮ ಮನಗೂಳಿ, ಪುರಸಭೆ ಲೆಕ್ಕಿಗ ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಬಸವರಾಜ ಜುಮನಾಳ, ಒಳಗೊಂಡು ಸಮಾಜದ ಮುಖಂಡರುಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.