ಡೋಹರ್ ಕಕ್ಕಯ್ಯ ಸಮುದಾಯದಿಂದ ಬೃಹತ್ ಪ್ರತಿಭಟನೆ

Jan 22, 2025 - 08:09
 0
ಡೋಹರ್ ಕಕ್ಕಯ್ಯ ಸಮುದಾಯದಿಂದ ಬೃಹತ್ ಪ್ರತಿಭಟನೆ

ಇಂಡಿ : ಡೋಹರ್ ಸಮುದಾಯವನ್ನು ೪ ನೇ ಗುಂಪಿನಲ್ಲಿ ಇರಿಸಲಾಗಿರುವ ಕ್ರಮವನ್ನು ಆಗ್ರಹಿಸಿ ಸಮಾಜಕ್ಕೆ ಆಗಿರುವ ಅನ್ಯಾಯಕ್ಕೆ ಮಿನಿ ವಿಧಾನಸೌಧ ಎದುರು ಸಮಾಜ ಬಾಂಧವರು ಪ್ರತಿಭಟಿಸಿದರು.                

ಭೀಮಾ ಶಂಕರ ಸಕ್ಕರೆ ಕಾರ್ಖಾನೆ ನಿದೇರ್ಶಕ ಮತ್ತು ನ್ಯಾಯವಾದಿ ಅಶೋಕ ಗಜಾಕೋಶ ಮಾತನಾಡಿ ಪರಿಶಿಷ್ಠ ಜಾತಿ ವರ್ಗೀಕರಣದಲ್ಲಿ ಡೋಹರ್ ಕಕ್ಕಯ್ಯ  ಸಮುದಾಯವನ್ನು ಅವೈಜ್ಞಾನಿಕವಾಗಿ ೪ ನೇ ಗುಂಪಿನಲ್ಲಿ ಇರಿಸಲಾಗಿದೆ. ಸಮುದಾಯವು ಚರ್ಮ ಸಂಬAದಿತ ಸಮುದಾಯವಾಗಿದ್ದು ಚರ್ಮ ಸಂಬAದಿತ ಕಸಬು ಮಾಡುವ ಮಾದಿಗ ಹಾಗೂ ಸಮಗಾರ, ಚಮ್ಮಾರ ಮೋಚಿ ಜಾತಿಗಳಿದ್ದು ಅವರಿಗೆ ಒಂದನೇಯ ಗುಂಪಿನಲ್ಲಿ  ಸೇರಿಸಿ ೬ ಪ್ರತಿಶತ ಮೀಸಲಾತಿ ನೀಡಿದ್ದಾರೆ ಎಂದರು.            

ನಿವೃತ್ತ ಉಪನ್ಯಾಸಕ ಸುರೇಶ ಕಟಕಕೊಂಡ ಮಾತನಾಡಿ ಡೋಹರ್ ಕಕ್ಕಯ್ಯ ಸಮುದಾಯವನ್ನು ಅತಿ ಸಣ್ಣ ಮತ್ತು ಅಲೆಮಾರಿ ಜನಾಂಗ ಎಂದು ತಿಳಿದು ೮೯ ಸಮುದಾಯದಲ್ಲಿ ಸೇರ್ಪಡೆ ಮಾಡಿದ್ದಾರೆ ಕಾರಣ ಒಂದನೇಯ ಗುಂಪಿನಲ್ಲಿರಿಸಿ ಶೇಕಡಾ ೬ ಮಿಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.              

ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್.ಆರ್.ಪೋಳ , ಮಳಸಿದ್ದ ಗಜಾಕೋಶ, ಮಾರುತಿ ಇಂಗಳೆ, ಜಗದೀಶ ಗಜಾಕೋಶ, ಶಿವಾಜಿ ನಾರಾಯಣಕರ, ಶರತ ಗಜಾಕೋಶ, ಅಮೀತ ಇಂಗಳೆ, ತುಳಜಾರಾಮ ಇಂಗಳೆ, ಸುಧೀರ ಕಟಕದೊಂಡ, ಕಿರಣ ಕಟಕದೊಂಡ, ಮಾನಪ್ಪ ಹೊಟಕರ, ,ಕಲ್ಲು ಚಾಂದಕವಟೆ, ಆನಂದಪ್ಪಾ ಹೊಟಕರ ಮತ್ತಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.