ಪಂಚ ಗ್ಯಾರಂಟಿಗಳ ವಿಳಂಬ ನೀತಿ ಖಂಡಿಸಿ ಜೆಡಿಎಸ್ ಪ್ರತಿಭಟನೆ

ವಿಜಯಪುರ: ರಾಜ್ಯ ಕಾಂಗ್ರೇಸ ಸರಕಾರ ನೀಡಿದ್ದ ಗ್ಯಾರಂಟಿ ಯೋಜನೆಗಳ ವಿಳಂಬ ನೀತಿ ಹಾಗೂ ಬಸ್ಸದರ ವಿವಿದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿಜಯಪುರ ಜಿಲ್ಲಾ ಜನತಾದಳ (ಜಾತ್ಯಾತೀತ) ವಿಜಯಪುರ ವತಿಯಿಂದ ರಾಜ್ಯದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರತಿಭಟನೆ ಮಾಡುವುದರ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಕಾಂಗ್ರೇಸ ಸರಕಾರ ವಿಧಾನ ಸಭೆಯ ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಗೃಹ ಲಕ್ಷ್ಮಿ ಹಣವಾದ ೨೦೦೦ ಪ್ರತಿ ತಿಂಗಳು ಸರ್ಮಕವಾಗಿ ನೀಡದೆ ಲೋಕಸಭೆ ಹಾಗೂ ಉಪ ಚುನಾವಣೆ ಸಂದರ್ಭದಲ್ಲಿ ಹಣಹಾಕಿ ರಾಜಕೀಯಕ್ಕೆ ಸೀಮಿತ ಮಾಡುತ್ತಿದ್ದು, ಸರಕಾರ ಹೇಳಿದಂತೆ ತಿಂಗಳ ಹಣವನ್ನು ಯಾವ ದಿನಾಂಕದಂದು ನೀಡುತ್ತಾರೆ ಎಂದು ಘೋಷಿಸಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಯುವ ನಿಧಿ ಹಣವನ್ನು ನೀಡುತ್ತಿಲ್ಲ. ಸದ್ಯ ಏಕಾಯಕಿ ಬಸ್ಸುದರ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ರಾಜ್ಯದ ಜನತೆ ಹೊರೆ ಹಾಕುವದರ ಮೂಲಕ ದ್ರೋಹ ಮಾಡುತ್ತಿದೆ. ರಾಜ್ಯ ಸರಕಾರದ ಈ ನಡೆಯು ಖಂಡನೀಯವಾಗಿದೆ. ಕಾರಣ ತಾವು ಮದ್ಯಪ್ರವೇಶಿಸಿ ಸರಕಾರ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗುವಂತೆ ರಾಜ್ಯಪಾಲರು ಸರಕಾರಕ್ಕೆ ನಿರ್ದೇಶಿಕಬೇಕೆಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಅಪ್ಪುಗೌಡ ಪಾಟೀಲ (ಮನಗೂಳಿ) ರಾಜ್ಯ ಉಪಾಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ರಾಜ್ಯ ಉಪಾಧ್ಯಕ್ಷರಾದ ಸುನೀತಾ ದೇವಾನಂದ ಚವ್ಹಾಣ, ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಎಸ್. ಮಾಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಹಿಪ್ಪರಗಿ, ವಿಜಯಪುರ ತಾಲೂಕ ಅಧ್ಯಕ್ಷರಾದ ನಿಂಗನಗೌಡ ಸೋಲಾಪುರ, ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರಾದ ಪೀರಪಾಶ್ಯಾ ಗಚ್ಚಿನಮಹಲ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುಜಾತಾ ಕಣಬೂರ, ಜಿಲ್ಲಾ ಯುವ ಅಧ್ಯಕ್ಷರಾದ ಸುಭಾಸ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜು ರಾಠೋಡ, ಮನೋಜ ಬಿರಾದಾರ, ಸಂಗಮೇಶ ಹಡಪದ, ಶಿವಾನಂದ ಹಿರೇಕುರುಬರ ಇನ್ನಿತರರು ಇದ್ದರು.