ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ

Feb 1, 2025 - 16:42
 0
ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ

ಸಿಂದಗಿ : ಶರಣರು ಸಂತರು  ವಚನಕಾರರು ಸಮಾಜದ ಶಾಶ್ವತ ದೊಡ್ಡ  ಆಸ್ತಿಯಾಗಿ ಸಮ ಸಮಾಜದ  ಸಾಮಾಜಿಕವಾಗಿ ಮೂಡನಂಬಿಕೆ  ಅಸಮಾನತೆ ಹೋಗಲಾಡಿಸುವ ಜೊತೆಗೆ  ವಚನದ ಮೂಲಕ   ಅಪಾರ ಜ್ಞಾನ ನೀಡಿರುವ  ಶರಣರಲ್ಲಿ ವಿರಘಂಟಿ ಮಡಿವಾಳ ಮಾಚಿದೇವರ  ಕೊಡುಗೆ ಮಹತ್ತರವಾದುದು  ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ  ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ   ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶರಣ ವೀರಘಂಟಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದರು.

ವೀರಘಂಟಿ ಶರಣ ಮಡಿವಾಳ  ಮಾಚಿದೇವರ ವಚನ  ಸಂದೇಶ ಆದರ್ಶಗಳು ಇಂದಿನ ಜನತೆ ಪಾಲಿಸಬೇಕು ಎಂದರು.

ವಿಶ್ರಾಂತ ಪ್ರಾಚಾರ್ಯ ಬಿ ಎಂ ಬಿರಾದಾರ ಮಾತನಾಡಿ ಶರಣ ಮಡಿವಾಳ ಮಾಚಿದೇವರ ವಚನಗಳು ಸರ್ವ ಕಾಲಿಕ ಸತ್ಯವಾಗಿ ಶರಣರ ಜಯಂತಿಗಳು ಜಾತಿಗೆ ಸಿಮಿತವಾಗದೇ ಸರ್ವ ಜನಾಂಗದವರು ಶರಣರ ಜಯಂತಿಯಲ್ಲಿ ಭಾಗವಹಿಸಿ ಅವರ ತತ್ವ ಆದರ್ಶಗಳು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು. 

ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಮಾತನಾಡಿ ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು ಎಂದರು.

ವಿಶ್ರಾಂತ ಉಪನ್ಯಾಸಕ ಪಿ ಎಂ ಮಡಿವಾಳರ ಮಾತನಾಡಿ ಶರಣ ಮಡಿವಾಳ ಮಾಚಿದೇವ ಸಮಾಜದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರ ದೇವರಡ್ಡಿ, ಶಾಂತು  ಎಮ್ ರಾಣಗೋಳ, ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಈರಣ್ಣ ಅಗಸರ, ತಿಪ್ಪಣ್ಣ ಅಗಸರ, ಶಂಕರ ಅಗಸರ ಯರಗಲ್, ಚಂದ್ರಶೇಖರ ಮಡಿವಾಳರ, ಗುರು ಅಗಸರ ಬೋರಗಿ, ಭೀಮಾಶಂಕರ ಅಗಸರ ಮಾಡಬಾಳ, ಮಲ್ಲು ಅಗಸರ ಬಂದಾಳ, ಗೋಲ್ಲಾಳ ಅಗಸರ, ವಿಜಯಕುಮಾರ ಅಗಸರ, ವಿಜಯಲಕ್ಷ್ಮೀ ಶಹಾಪೂರ, ತುಳಜಾರಾಮ ಅಗಸರ, ಶಾಂತು ಅಗಸರ, ಮಡಿವಾಳಪ್ಪ ದೊಡಮನಿ, ಅಶೋಕ ಅಗಸರ, ಮಡಿವಾಳಪ್ಪ ಮಡಿವಾಳರ, ಈರಣ್ಣ ಅಗಸರ, ವಿನಯಕುಮಾರ ಅಗಸರ, ಶರಣು ಅಗಸರ, ಈರಘಂಟಿ ನೀಲಹಳ್ಳಿ , ಅರವಿಂದ್ರ ಅಗಸರ, ಸಂಗು ಅಗಸರ, ಕಲ್ಲು ಅಗಸರ, ಮಲ್ಲಪ್ಪ ಅಗಸರ, ಕಾಳು ಅಗಸರ, ಮಹೇಶ ಅಗಸರ, ಗಿರೀಶ ಅಗಸರ, ಯಮನಬಾಯಿ ಅಗಸರ, ಮುತ್ತು ಅಗಸರ  ಸೇರಿದಂತೆ  ಮಡಿವಾಳ ಸಮಾಜದ ಮುಖಂಡರು  ಇದ್ದರು. ಉಪ ತಹಶೀಲ್ದಾರ ಇಂದ್ರಾಬಾಯಿ ಬಳಗನೂರ  ಸ್ವಾಗತಿಸಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.