ಅನುಭವ ಮಂಟಪ ನಿರ್ಮಿಸಿದ ಕೀರ್ತಿ ವಿಜಯಪುರ ಜಿಲ್ಲೆಗಿದೆ : ಡಾ.ಎಚ್.ಎಸ್.ಗಣೇಶ ಭಟ್ಟ

ಸಿಂದಗಿ: ವಿಜಯಪುರ ಜಿಲ್ಲೆ ಅಣ್ಣ ಬಸವಣ್ಣ ನಾಡು. ಇಲ್ಲಿ ಅನುಭವ ಮಂಟಪ ನಿರ್ಮಿಸಿದ ಕೀರ್ತಿ ಇದೆ ಎಂದು ಬೆಂಗಳೂರಿನ ಎಂ.ಇ.ಎಸ್. ಟೀಚರ್ಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ ಡಾ.ಎಚ್.ಎಸ್.ಗಣೇಶ ಭಟ್ಟ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯೂನಿವರ್ಸಲ್ ಸೆಂಟ್ರಲ್ ಸ್ಕೂಲ್ನಲ್ಲಿ ಹಮ್ಮಿಕೊಂಡ ಭೀಮೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಗು ಶಾಲೆಯಿಂದ ಬಂದ ತಕ್ಷಣ ಮಕ್ಕಳ ಮನೆಗೆಲಸ ನೋಡಿವುದು ಪಾಲಕರ ಕರ್ತವ್ಯ. ಶಾಲೆಯಲ್ಲಿ ಮೌಲ್ಯ ಮತ್ತು ಚಾರಿತ್ರ್ಯದ ಬಗ್ಗೆ ಮಕ್ಕಳಲ್ಲಿ ತಿಳಿಸಿಕೊಡುವುದು ಶ್ಲಾಘನೀಯ. ಇಲ್ಲಿರುವ ಮಕ್ಕಳು ವಿದೇಶಕ್ಕೆ ಓದಲು ಹೋದರು ಮತ್ತೆ ತವರು ನಾಡಿಗೆ ಬರಲೆಬೇಕು. ಬರುವ ಹಾಗೆ ತಂದೆ ತಾಯಿಗಳು ಮಾಡಬೇಕು ಏಕೆಂದರೆ ಮುಪ್ಪಿನ ಕಾಲದಲ್ಲಿ ನಮಗೆ ನೋಡಿಕೊಳ್ಳಲು ಅವರ ಅವಶ್ಯಕತೆ ತುಂಬಾ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕಗಳ ಸಂಯೋಜಕ ಗುರುರಾಜ ಹೊಸೂರಕರ, ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿದರು.
ಈ ವೇಳೆ ಪ್ರಾಚಾರ್ಯ ಶಾಯಿನ್ ಶೇಖ್, ನಿರ್ದೇಶಕರಾದ ಡಾ.ಎಂ.ಎಂ ಪಡಶೆಟ್ಟಿ, ಜಿ.ಕೆ. ಪಡಗಾನೂರ, ಪ್ರಶಾಂತ ಕಮತಗಿ, ಭೀಮಾಶಂಕರ ತಾರಾಪೂರ, ದತ್ತು ಮಾವುರ, ಶ್ರೀಮಂತ ಮಲ್ಲೇದ, ಭೀಮಾಶಂಕರ ಮಾವುರ, ಪಾಲಕರಾದ ಸಂಗಣ್ಣ ಇಂಚಗೇರಿ, ಶಿವಪ್ಪ ಗವಸಾನಿ, ಮಲ್ಲಿಕಾರ್ಜುನ ಅಲ್ಲಾಪುರ, ರಮೇಶ ಜೋಗುರ, ಶಶಿಧರ ಅವಟಿ, ಶರಣು ಮಾವುರ, ರಾಜಶೇಖರ ನರಗೋದಿ, ಸಂತೋಷ ಬಮ್ಮಣ್ಣಿ, ಗುರುರಾಜ ಪಡಶೆಟ್ಟಿ, ಡಾ.ಶರಣಬಸವ ಜೋಗುರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಶಿವಾನಂದ ತಾರಾಪೂರ, ಚನ್ನು ಪಡಶೆಟ್ಟಿ ಸೇರಿದಂತೆ ಅನೇಕರು ಇದ್ದರು.