ಕೆಲಸದಲ್ಲಿ ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಹಾಸನ ರಘು

ರಾಮನಗರ : ಜೀವನದಲ್ಲಿ ಪ್ರಾಮಾಣಿಕತೆ ಕೆಲಸದಲ್ಲಿ ನಿರಂತರ ಪ್ರಯತ್ನ ತಾಳ್ಮೆ ಮನುಷ್ಯನಲ್ಲಿ ಎಲ್ಲಾ ಗೌರವವನ್ನು ನೀಡುತ್ತವೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಹಾಸನ ರಘು ಹೇಳಿದರು.
ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಅರ್ಪಿತಾ ಚಾರಿಟಬಲ್ ಟ್ರಸ್ಟ್ ರಿ ಮಿನಿಸ್ಟರ್ ಆಫ್ ಕಲ್ಚರ್ ಭಾರತ ಸರ್ಕಾರ ಹಾಗೂ ಸಾಹಸ ಕಲಾಕೇಂದ್ರ ಸಹಯೋಗದೊಂದಿಗೆ ಜಾನಪದ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಮನಗರ ಸಾಹಸ ಕಲಾಕೇಂದ್ರ ಶುರುಮಾಡಿ ಇಪ್ಪತ್ತು ವರ್ಷಗಳ ಸಮರಕಲೆ ಜಿಮೆಸ್ಟಿಕ್ ಮಲ್ಲಗಂಬ ಕುಸ್ತಿ ಜಾನಪದ ಕಲೆಗಳ ಪ್ರದರ್ಶನ ಮತ್ತು ತರಬೇತಿ ನೀಡುತ್ತಾ ಭಾರತದ 28 ರಾಜ್ಯಗಳಲ್ಲಿ ಪ್ರದರ್ಶನ ನೀಡಿ ಸನ್ಮಾನ್ಯ ಪ್ರಧಾನಮಂತ್ರಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಮನಗರ ಜಿಲ್ಲೆ ನಮ್ಮ ತವರುಮನೆ ನನ್ನ ಜೀವನದ ಶೈಲಿ ಬದಲಿಸಿದೆ, ನಮ್ಮನ್ನು ಗುರುತಿಸಿ ಬೆಳೆಸಿದ ರಾಮನಗರ ಜಿಲ್ಲೆಗೆ ಹಾಗೂ ಎಲ್ಲರಿಗೂ ನನ್ನ ಹೃದಯ ಪೂರ್ವಕವಾಗಿ ಧನ್ಯವಾದಗಳು ಎಂದರು.
ಕೇಲೋ ಇಂಡಿಯ ಗೌರವ ಅಧ್ಯಕ್ಷ ಹಾಗೂ ರಾಮನಗರ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಮಾತನಾಡಿ ರಾಮನಗರ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಮ್ಮ ಡಾ. ಹಾಸನ್ ರಘುರವರ ಶ್ರಮ ನಿಜಕ್ಕೂ ಶ್ಲಾಘನೀಯ ಅವರಿಗೆ ಮತ್ತಷ್ಟು ಬಹುಮಾನ ಸಿಗಲಿ ಅರ್ಪಿತ ಚಾರಿಟಬಲ್ ವತಿಯಿಂದ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ ಎಂದು ಶ್ಲಾಗಿಸಿದರು.
ಸಂಸ್ಥೆಯ ಕಾರ್ಯದರ್ಶಿ ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಅರ್ಪಿತ ನಮ್ಮ ಸಹೋದರಿ ಒಬ್ಬ ಅದ್ಭುತ ಕಲಾವಿದೆ, ಅಕಾಲಿಕ ನಿಧನದಿಂದ ಈ ಸಂಸ್ಥೆ ಸ್ಥಾಪನೆ ಮಾಡಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಕಲೆ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಮನಗರ ತಾಲ್ಲೂಕು ಅಧ್ಯಕ್ಷರಾದ ಬಿ ಟಿ ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಅದರಲ್ಲೂ ನಮ್ಮ ಜಿಲ್ಲೆಗೆ ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಡಾ ಹಾಸನ ರಘು ಅವರಿಗೆ ಅಭಿನಂದನೆಗಳು ಎಂದರು.
ಜಿಲ್ಲಾ ಕಚೇರಿಯಿಂದ ಹೊರಟ ಮೆರವಣಿಗೆಯಲ್ಲಿ ಅರ್ಪಿತ ಸಂಸ್ಥೆ ಎಲ್ಲಾ ಕಲಾವಿದರ ಜೊತೆಯಲ್ಲಿ ಬಸವರಾಜ ಕುದುರೆ ಅವರ ಮಲ್ಲಕಂಬ ಪ್ರದರ್ಶನ, ಪೂಜಾ ಕುಣಿತ, ಪಾರ್ಥಸಾರಥಿ ಕುಣಿತ, ಮಹಿಳಾ ಕಂಸಾಳೆ, ಬಿಂದು ತಂಡ, ಸಂತೋಷ್ ಮಾಗಡಿ, ಕೋಲಾಟ, ನೃತ್ಯ, ಡೊಳ್ಳು, ಕುಣಿತ, ಪಟಕುಣಿತ, ಜಾನಪದ ನೃತ್ಯ, ವೈಭವ ಹಾಗೂ ಹಲವು ಬಗೆಯ ಈ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮೆರಗು ತಂದಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ಡಾ ಎನ್ ವಿ ಲೋಕೇಶ್, ನೃತ್ಯ ಕಲಾವಿದ ರೇಣುಕಪ್ರಸಾದ್ ಎಸ್, ಮಾಲೀಕರಾದ ರಾಮಾಂಜನೇಯ, ರಮೇಶ್ ಹೊಸದೂಡ್ಡಿ ಶ್ರೀಶೈಲ ಹೂಗರ್ ರಮೇಶ್, ಸಂತೋಷ್, ರವಿಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.