ಬಂದಾಳ ಶಾಲೆಯಲ್ಲಿ ಮಡಿವಾಳ ಮಾಚಿದೇವ  ಜಯಂತಿ ಆಚರಣೆ 

Feb 2, 2025 - 12:12
 0
ಬಂದಾಳ ಶಾಲೆಯಲ್ಲಿ ಮಡಿವಾಳ ಮಾಚಿದೇವ  ಜಯಂತಿ ಆಚರಣೆ 

ಸಿಂದಗಿ : 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಬಿಜ್ಜಳ ರಾಜನನ್ನೇ ಎದುರಿಸಿ ವೀರಶರಣ ಎನಿಸಿಕೊಂಡವರು ಮಡಿವಾಳ ಮಾಚಿದೇವ ಎಂದು  ಶಿಕ್ಷಕ ಬರಹಗಾರ ಭಾಗೇಶ ಗೋಲಗೇರಿ  ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆ  ಆವರಣದಲ್ಲಿ  ಹಮ್ಮಿಕೊಂಡಿದ್ದ ಶರಣ  ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದಿನ ಶರಣರು ವೃತ್ತಿಗೆ, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ಯಾವ ಮಹಾರಾಜನಿಗೂ ಹೆದರುತ್ತಿರಲಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ನಿದರ್ಶನವಾಗಿದ್ದಾರೆ ಎಂದರು.

ಹಿರಿಯ ಶಿಕ್ಷಕ ಚಂದ್ರಶೇಖರ ಬುಯ್ಯಾರ ಮಾತನಾಡಿ ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.

ಶಿಕ್ಷಕ ಮಕ್ಕಳ ಸಾಹಿತಿ  ಬಸವರಾಜ  ಅಗಸರ ಮಾತನಾಡಿ ಅಣ್ಣ  ಬಸವಣ್ಣನವರೇ ತಮ್ಮ ವಚನದಲ್ಲಿ ಎನ್ನ ಕಾಯವ ಶುದ್ದಿ ಮಾಡಿದವ ಮಡಿವಾಳ ಎಂದು ವರ್ಣಿಸಿದ್ದಾರೆ  ವೃತ್ತಿಯಲ್ಲಿ ಮಡಿವಾಳನಾದರೂ ಭಕ್ತಿಯಲ್ಲಿ ಬಸವಣ್ಣನಗಿಂತಗೈ ಅಗ್ರಸ್ಥಾನ ಪಡೆದವರು ಮಡಿವಾಳ ಮಾಚಿದೇವ. ಜಾತಿ, ಮತ, ಪಂಥ ಸಂಕೋಲೆಯಿಂದ ಹೊರಬಂದು ಮನುಷ್ಯಕುಲ ಒಂದೇ ಎಂದು ಸಾರಿದರು ಎಂದು ಹೇಳಿದರು.

ಮುಖ್ಯ ಶಿಕ್ಷಕ ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಪೋದ್ದಾರ, ಪುರುಷೋತಮ ಕುಲಕರ್ಣಿ, ಸಿದ್ದು ತಳವಾರ, ಸುಮಂಗಲಾ ಕೆಂಬಾವಿ, ಮಲ್ಲಮ್ಮ ಹಿಪ್ಪರಗಿ, ಈಶ್ವರಿ ನಾಗಠಾಣ, ಬೋರಮ್ಮ ಬಿರಾದಾರ, ಸೋಮೈಯಾ ಬಿಜಾಪೂರ, ಅರ್ಚನ ಬಿರಗೊಂಡ ಸೇರಿದಂತೆ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.