19ಕೆರೆಗಳಿಗೆ ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ: ಅಣ್ಣಪ್ಪ ಖೈನೂರ ಎಚ್ಚರಿಕೆ

Feb 2, 2025 - 16:07
Feb 2, 2025 - 22:47
 0
19ಕೆರೆಗಳಿಗೆ ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ: ಅಣ್ಣಪ್ಪ ಖೈನೂರ ಎಚ್ಚರಿಕೆ

ಹೊರ್ತಿ:'ತಿಡಗುಂದಿ ಶಾಖಾ ಕಾಲುವೆ ಮೂಲಕ ಇಂಡಿ ಮತ್ತು ಚಡಚಣ ತಾಲ್ಲೂಕಿನ 19 ಕೆರೆಗಳಿಗೆ ಶೀಘ್ರ ನೀರು ಹರಿಸಿ, ನೀರು ತುಂಬಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ' ಎಂದು ಕೆರೆಗಳಿಗೆ ನೀರು ಹರಿಸುವ ಹೋರಾಟಗಾರ ಪ್ರಗತಿಪರ ರೈತ ಅಣ್ಣಪ್ಪ ಸಾಹುಕಾರ ಖೈನೂರ ಎಚ್ಚರಿಕೆ ನೀಡಿದರು.

ಹೊರ್ತಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 'ತಿಡಗುಂದಿ ಶಾಖಾ ಕಾಲುವೆ ಮೂಲಕ ಇಂಡಿ ಮತ್ತು ಚಡಚಣ ತಾಲೂಕಿನ 19 ಕೆರೆಗಳನ್ನು ತುಂಬಿಸುವ ಕಾಮಗಾರಿ ಈಗಾಗಲೇ ಮುಗಿದಿದೆ. ಕಳೆದ ವರ್ಷ ಚಾಲ್ತಿ ವರ್ಷಕ್ಕೆ ಸಂಬಂಧಿಸಿದಂತೆ ಇಂಡಿ ಮತ್ತು ಚಡಚಣ ತಾಲ್ಲೂಕಿನ ಮತ್ತು ಈ ಭಾಗದ ಬಹುತೇಕ ಕೆಲ ಹಳ್ಳಿಗಳಿಗೆ ಕಡಿಮೆ ಮಳೆಯಾಗಿದೆ. ಇದರಿಂದ ಈ ಭಾಗದ ಲ್ಲಿ ಬಹುತೇಕ ಎಲ್ಲ ಭಾವಿ ಮತ್ತು ಕೊಳವೆ ಬಾವಿಗಳ್ಳಲ್ಲಿನ  ನೀರು ಬತ್ತಿ ಹೋಗಿ ಕುಡಿಯುವ ನೀರಿಗೂ ತುಂಬಾ ತೊಂದರೆ ತತ್ವಾರ ಉಂಟಾಗಿದೆ ಅಲ್ಲದೇ  ದ್ರಾಕ್ಷಿ ಹಾಗೂ ದಾಳಿಂಬೆ ಮತ್ತು ಲಿಂಬೆ ಇತರೆ ತೋಟಗಾರಿಕಾ ಬೆಳೆಗಾರರು ಕಂಗಾಲಾಗಿ ರೋಶಿ ಹೋಗಿದ್ದಾರೆ' ಎಂದು ತಿಳಿಸಿದರು.

ಈ ಇಂಡಿ ಮತ್ತು ಚಡಚಣ ಅವಳಿ ತಾಲ್ಲೂಕಿನ  ಮತ್ತು ಹೊರ್ತಿ ಈ ಭಾಗದಲ್ಲಿನ  ದೀರ್ಘಾವಧಿ ಬೆಳೆಗಳು ಸಂಪೂರ್ಣ ಒಣಗುತ್ತಿದ್ದು, ರೈತರ ಬದುಕು ಶೋಚನೀಯವಾಗಲಿದೆ. ರೈತರು ಬೃಹತ್ ಪ್ರಮಾಣದಲ್ಲಿ ಗುಳೆ ಹೋಗುವ ಅನಿವಾರ್ಯತೆ ಎದುರಾಗಲಿದೆ. ಪ್ರಾಣಿ-ಪಕ್ಷಿಗಳೂ ಬದುಕುವುದು ಕಷ್ಟವಾಗಿದೆ ಎಂದು ದೂರಿದ್ದಾರೆ. ಜನಪ್ರತಿನಿಧಿಗಳಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಈಗಾಗಲೇ 19 ಕೆರೆಗಳಿಗೆ ನೀರು ಹರಿಸುವ ಕೆಲಸದಲ್ಲಿ ಸಾಕಷ್ಟು ವಿಳಂಬವಾಗಿದೆ. ಫೆ.8ರೊಳಗಾಗಿ 19ಕೆರೆಗಳಿಗೆ ನೀರು ಹರಿಸದಿದ್ದರೆ ಫೆ.9ರಂದು ಈ ಭಾಗದ ರೈತರು ಸೇರಿ ಹೊರ್ತಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಮಾತ್ರವಲ್ಲ ಎನ್.ಎಚ್-52ರ ರಸ್ತೆ ತಡೆದು ಉಗ್ರ ಪ್ರತಿಭಟನೆ ಮಾಡುತ್ತೇವೆ' ಎಂದವರು ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದ್ದಾರೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.