ಮಾಲಗಾರ ಸಮಾಜದ ಏಳಿಗೆಗಾಗಿ ಶ್ರಮಿಸೋಣ: ಸಿದ್ದರಾಮ ಮೇತ್ರೆ

Feb 2, 2025 - 22:38
 0
ಮಾಲಗಾರ ಸಮಾಜದ ಏಳಿಗೆಗಾಗಿ ಶ್ರಮಿಸೋಣ: ಸಿದ್ದರಾಮ ಮೇತ್ರೆ
ಅಫಜಲಪುರ: ಇತ್ತಿಚಿನ ದಿನಗಳಲ್ಲಿ ಎಲ್ಲಾ ಸಮಾಜಗಳು ಪೈಪೋಟಿಗೆ ಬಿದ್ದಂತೆ ಮುನ್ನೆಲೆಗೆ ಬರುತ್ತಿರುವಾಗ ಸಣ್ಣ ಸಮಾಜವಾಗಿರುವ ಮಾಲಗಾರ ಸಮಾಜದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಮಹಾರಾಷ್ಟçದ ಮಾಜಿ ಗೃಹ ಸಚಿವ ಸಿದ್ದರಾಮ ಮೇತ್ರೆ ಹೇಳಿದರು.
ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ನಿಂಬೆಕ್ಕದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆದ ಸಾವಿತ್ರಿಬಾಯಿ ಫುಲೆ ೧೯೪ನೇ ಜಯಂತಿ ಹಾಗೂ ಮಾಲಗಾರ ಸಮಾಜದ ರಾಜ್ಯ ಮಟ್ಟದ ವಧುವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸಮಾಜಕ್ಕೆ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಸಾಂಸ್ಕೃತಿಕವಾಗಿ, ಶೈಕ್ಷಣ ಕವಾಗಿ, ಸಾಮಾಜಿಕವಾಗಿ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಸಮಾಜದ ಬಾಂಧವರು ಪಾಲಿಸಿದರೆ ಸಮಾಜ ಏಳಿಗೆ ಆಗುವುದರಲ್ಲಿ ಸಂಶಯವಿಲ್ಲ ಎಂದ ಅವರು ಮಾಲಗಾರ ಸಮಾಜದ ಏಳಿಗೆಗಾಗಿ ನಾನು ನಿಮ್ಮೆಲ್ಲರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತೇನೆ. ಅಲ್ಲದೆ ರಾಜ್ಯ ಮಟ್ಟದ ವಧು ವರರ ಸಮಾವೇಶ ನಡೆಯುತ್ತಿರುವುದು ಒಳ್ಳೆಯ ಬೆಳವಣ ಗೆಯಾಗಿದೆ ಎಂದರು.
ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೀಠಾಧಿಪತಿ ವೀಹಮಹಾಂತ ಶಿವಾಚಾರ್ಯರು ಮಾತನಾಡುತ್ತಾ ನಿಲೂರ ನಿಂಬೆಕ್ಕ ದೇವಿ ಪರಮಾತ್ಮ ವೇಶ ಬದಲಿಸಿ ಮನೆಗೆ ಬಂದು ಮಗನ ತಲೆ ಕಡಿದು ಪ್ರಸಾದ ಮಾಡಿ ಹಾಕುವಂತೆ ಬೇಡಿಕೆ ಇಟ್ಟಾಗ ಮಗ ಎನ್ನುವುದನ್ನು ನೋಡದೆ ತಲೆ ಕಡಿದು ಪ್ರಸಾದ ಮಾಡಿ ಭಕ್ತಿ ಮೇರೆದವರಾಗಿದ್ದಾರೆ. ಅಲ್ಲದೆ ಆಧುನಿಕ ಯುಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆ, ಜಾತಿ ತಾರತಮ್ಯ, ಕಂದಾಚಾರ, ಮೌಢ್ಯಗಳು ತುಂಬಿ ತುಳುಕುತ್ತಿರುವಾಗ ವ್ಯವಸ್ಥೆಯ ವಿರುದ್ದ ಹೋರಾಟ ಮಾಡಿದ ಫುಲೆ ದಂಪತಿಗಳು ತಳ ಸಮುದಾಯದವರಿಗೆ ಶಿಕ್ಷಣ ಕಲಿಸಿದ್ದಾರೆ. ಅದರ ಫಲವಾಗಿಯೇ ಇಂದು ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡುವಂತಾಯಿತು. ಅಲ್ಲದೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರಿಗೂ ಫುಲೆ ದಂಪತಿಗಳು ಆದರ್ಶವಾಗಿದ್ದರು ಎಂದರೆ ಅವರ ಆದರ್ಶಗಳಲ್ಲಿ ಎಂತಹ ಶಕ್ತಿ ಇದೆ ಎಂದು ನಾವು ತಿಳಿದುಕೊಳ್ಳಬೇಕಾಗಿದೆ ಎಂದರು.
ವಿದ್ಯಾರ್ಥಿನಿ ನಮೃತಾ ಶರಣಬಸಪ್ಪ ಪದಕಿ ಮಾತನಾಡುತ್ತಾ ಇಂದು ಮಹಿಳೆ ಎಲ್ಲಾ ರಂಗದಲ್ಲೂ ಅಗಾಧ ಸಾಧನೆ ಮಾಡುತ್ತಿದ್ದಾಳೆಂದರೆ ಅದಕ್ಕೆ ಕಾರಣ ಸಾವಿತ್ರಿಬಾಯಿ ಫುಲೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೂ ಫುಲೆ ದಂಪತಿಗಳು ಆದರ್ಶವಾಗಿದ್ದರು ಎಂದರೆ ನಾವುಗಳು ಅವರ ಆದರ್ಶಗಳ ಪಾಲನೆಯಲ್ಲಿ ಹಿಂದೆ ಬೀಳಬಾರದು ಎಂದರು.
 
ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡುತ್ತಾ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಅವರ ಆದರ್ಶಗಳನ್ನು ನಮ್ಮ ಸಮಾಜದವರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಎಲ್ಲರ ಬದುಕು ಹಸನಾಗಲಿದೆ. ಮಾಲಗಾರ ಸಮಾಜ ಸಣ್ಣ ಸಮಾಜವಾದರೂ ಸಂಸ್ಕಾರವAತ ಸಮಾಜವಾಗಿದೆ. ಸಮಾಜವು ಇನ್ನೂ ಉತ್ತಮ ರೀತಿಯಲ್ಲಿ ಏಳಿಗೆ ಕಾಣಬೇಕಾದರೆ ಸಮಾಜಬಾಂಧವರು ಒಂದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಶಿವಾನಂದ ತೋಳನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಈ ಸಂದರ್ಭದಲ್ಲಿ ಮಕ್ಬೂಲ್ ಪಟೇಲ್, ರಜಾಕ್ ಪಟೇಲ್, ಶಿವಶರಣಪ್ಪ ಮೂಳೆಗಾಂವ, ಡಾ. ಮಹಾಂತಪ್ಪ ಹಾಳಮಳ್ಳಿ, ಸಿದ್ರಾಮಪ್ಪ ಮನಮಿ, ಲಕ್ಷö್ಮಣ ಹಂಜಗಿ ವಳಸಂಗ, ಶರಣು ಪದಕಿ, ಚಂದು ಕರ್ಜಗಿ, ಬಸು ಮನಮಿ, ಮಲ್ಲಿನಾಥ ಮಳ್ಳಿ, ಪಂಡಿತ ಶೇರಿಕಾರ ಆಳಂದ, ಶಿವಪ್ಪ ಬೋಳಶೆಟ್ಟಿ, ಮಹಾದೇವ ಪಗಡೆ, ಸಿದ್ದಣ್ಣ ಮಾಲಗಾರ, ಬಸಲಿಂಗಪ್ಪ ಹಡಲಗಿ, ಅಪ್ಪಾಸಾಬ ಜಗದಿ, ಸಂತೋಷ ಮನಮಿ, ಮಲ್ಲಿನಾಥ ನಂದಿಕೋಲ ಅಕ್ಕಲಕೋಟ,ಲಷ್ಮಿಪುತ್ರ ಪದಕಿ, ಶಿವಾನಂದ ಕಾಮಗೊಂಡ, ಪ್ರಕಾಶ ಕಲ್ಯಾಣಕರ, ಶಿವಾನಂದ ಮಾಡ್ಯಾಳ, ಸೈಬಣ್ಣ ಕಲ್ಲೋಳಿ, ಜೆಟ್ಟಿಂಗರಾಜ ಮಾಲಗಾರ, ಗುರುನಾಥ ಧೂಳೆ,  ಬಸವರಾಜ ಮಾಗಳಗಾಂವ, ಸರ್ವೇಶ ಲಿಂಬಿತೋಟ, ರಮೇಶ ಬಗಲಿ ಬಿಜಾಪುರ, ಅಮೃತ ಮಾತಾರಿ, ಅರವಿಂದ ಖೈರಾಟ, ಶರಣಬಸಪ್ಪ ಕಲ್ಲೋಳಿ, ಶ್ರೀಶೈಲ್ ಕಲ್ಯಾಣಕರ, ಭೀಮಾಶಂಕರ ಡೊಂಗರಿತೋಟ, ರಾಜೇಶ ಕಲ್ಲೋಳಿ, ಸಿದ್ದರಾಮ ಮನಮಿ, ಸಿದ್ದಾರಾಮ ಮಲ್ಲಾಬಾದ, ಡಾ. ಮಹೇಶ ಪಾಟೀಲ್,ಲಕ್ಷ್ಮಿಪುತ್ರ ಮಾತಾರಿ, ದುಂಡಪ್ಪ ಮೇತ್ರಿ, ಸಿದ್ದಾರಾಮ ಕೋರೆ, ಚಂದ್ರಶೇಖರ ನಿಂಬರ್ಗಿ, ಸಂತೋಷ ಮನಮಿ, ಶಿವಾನಂದ ಕಾಮಗೋಂಡ, ಭೀಮಾಶಂಕರ ಕಲ್ಯಾಣಕರ, ಮಂಜುನಾಥ ಮನಮಿ, ಶಿವಾನಂದ ಕಾಮಗೊಂಡ, ಮಹಾಂತೇಶ ಸರಸಂಭಾ, ಶ್ರೀಕಾಂತ ಪದಕಿ, ಸಿದ್ದಾರೂಢ ಮನಮಿ, ಮಹಾಂತೇಶ ಕಲ್ಲೋಳಿ, ಸುನೀಲ ಯಲ್ದೆ ಸೇರಿದಂತೆ ಅನೇಕರು ಇದ್ದರು. ವಿಶ್ವನಾಥ ಮಲಘಾಣ ಸ್ವಾಗತಿಸಿದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.