ಜಿಲ್ಲೆಯಲ್ಲಿ ಪೌತಿ-ವಾರಸಾ ಖಾತೆ ಆಂದೋಲನ : ಸದುಪಯೋಗಕ್ಕಾಗಿ ಡಿಸಿ ಡಾ.ಆನಂದ.ಕೆ ಕರೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಖಾತೆ ಬದಲಾವಣೆ ಮಾಡಲು ಪೌತಿ-ವಾರಸಾ ಖಾತೆ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.
ಮಾಲೀಕತ್ವವು ಮೃತರ ವಾರಸುದಾರರ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪೌತಿ-ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ-ವಾರಸಾ ಖಾತೆ ಆಂದೋಲನ ನಡೆಸಲಾಗುತ್ತಿದೆ.
ಅಂತಹ ವಾರಸುದಾರರಿಗೆ ಸರ್ಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನಗಳಿಂದ ಹಾಗೂ ಜಮೀನು ಅಭಿವೃದ್ಧಿಗೆ ಸಂಬAಧಿಸಿದ ಸಾಲ ಸೌಲಭ್ಯ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹÀ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮೃತರ ವಾರಸುದಾರರ ಮನೆ ಬಾಗಿಲಿಗೆ ಆಗಮಿಸಿ, ಇ-ಪೌತಿ-ವಾರಸಾ ಖಾತೆಯನ್ನು ದಾಖಲಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ.
ವಾರಸುದಾರರು ಅಗತ್ಯ ದಾಖಲೆಗಳಾದ ವಂಶ ವೃಕ್ಷ ಮತ್ತು ಮಹಜರ್ ಅಥವಾ ಪಂಚನಾಮಾ, ಎಲ್ಲ ವಾರಸುದಾರರ ಆಧಾರ್ ಕಾರ್ಡ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಇ-ಕೆವೈಸಿಗಾಗಿ ಆಧಾರ ಕಾರ್ಡಿಗೆ ನೋಂದಾಯಿಸಿಕೊAಡಿರುವ ಮೊಬೈಲ್ಗೆ ಸ್ವೀಕರಿಸುವ ಒಟಿಪಿ ನೀಡುವುದು.
ವಿಜಯಪುರ-೩೮೫೬, ತಿಕೋಟಾ-೨೯೪೭, ಬಬಲೇಶ್ವರ-೫೮೭೬, ಬಸವನ ಬಾಗೇವಾಡಿ-೭೨೩೨, ನಿಡಗುಂದಿ-೩೩೭೧, ಕೋಲ್ಹಾರ-೨೩೯೯, ಮುದ್ದೇಬಿಹಾಳ-೧೦೦೩೭, ತಾಳಿಕೋಟೆ-೫೬೨೭, ಇಂಡಿ-೭೧೭೭, ಚಡಚಣ-೩೭೫೧, ಸಿಂದಗಿ-೩೯೫೫, ಆಲಮೇಲ-೩೦೭೧ ಹಾಗೂ ದೇವರಹಿಪ್ಪರಗಿ-೩೦೭೫ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೬೨,೩೭೪ ಪ್ರಕರಣವನ್ನು ಪೌತಿ-ವಾರಸಾ ಖಾತೆಗಾಗಿ ಗುರುತಿಸಲಾಗಿದೆ. ಪೌತಿ-ವಾರಸಾ ಆಂದೋಲನಾ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.