ಜಿಲ್ಲೆಯಲ್ಲಿ ಪೌತಿ-ವಾರಸಾ ಖಾತೆ ಆಂದೋಲನ : ಸದುಪಯೋಗಕ್ಕಾಗಿ ಡಿಸಿ ಡಾ.ಆನಂದ.ಕೆ ಕರೆ

Jul 17, 2025 - 22:49
 0
ಜಿಲ್ಲೆಯಲ್ಲಿ ಪೌತಿ-ವಾರಸಾ ಖಾತೆ ಆಂದೋಲನ : ಸದುಪಯೋಗಕ್ಕಾಗಿ ಡಿಸಿ ಡಾ.ಆನಂದ.ಕೆ ಕರೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಖಾತೆ ಬದಲಾವಣೆ ಮಾಡಲು ಪೌತಿ-ವಾರಸಾ ಖಾತೆ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.            

ಮಾಲೀಕತ್ವವು ಮೃತರ ವಾರಸುದಾರರ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪೌತಿ-ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ-ವಾರಸಾ ಖಾತೆ ಆಂದೋಲನ ನಡೆಸಲಾಗುತ್ತಿದೆ.         

ಅಂತಹ ವಾರಸುದಾರರಿಗೆ ಸರ್ಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನಗಳಿಂದ ಹಾಗೂ ಜಮೀನು ಅಭಿವೃದ್ಧಿಗೆ ಸಂಬAಧಿಸಿದ ಸಾಲ ಸೌಲಭ್ಯ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹÀ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮೃತರ ವಾರಸುದಾರರ ಮನೆ ಬಾಗಿಲಿಗೆ ಆಗಮಿಸಿ, ಇ-ಪೌತಿ-ವಾರಸಾ ಖಾತೆಯನ್ನು ದಾಖಲಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ.             

ವಾರಸುದಾರರು ಅಗತ್ಯ ದಾಖಲೆಗಳಾದ  ವಂಶ ವೃಕ್ಷ ಮತ್ತು ಮಹಜರ್ ಅಥವಾ ಪಂಚನಾಮಾ, ಎಲ್ಲ ವಾರಸುದಾರರ ಆಧಾರ್ ಕಾರ್ಡ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಇ-ಕೆವೈಸಿಗಾಗಿ ಆಧಾರ ಕಾರ್ಡಿಗೆ ನೋಂದಾಯಿಸಿಕೊAಡಿರುವ ಮೊಬೈಲ್‌ಗೆ ಸ್ವೀಕರಿಸುವ ಒಟಿಪಿ ನೀಡುವುದು.            

ವಿಜಯಪುರ-೩೮೫೬, ತಿಕೋಟಾ-೨೯೪೭, ಬಬಲೇಶ್ವರ-೫೮೭೬, ಬಸವನ ಬಾಗೇವಾಡಿ-೭೨೩೨, ನಿಡಗುಂದಿ-೩೩೭೧, ಕೋಲ್ಹಾರ-೨೩೯೯, ಮುದ್ದೇಬಿಹಾಳ-೧೦೦೩೭, ತಾಳಿಕೋಟೆ-೫೬೨೭, ಇಂಡಿ-೭೧೭೭, ಚಡಚಣ-೩೭೫೧, ಸಿಂದಗಿ-೩೯೫೫, ಆಲಮೇಲ-೩೦೭೧ ಹಾಗೂ ದೇವರಹಿಪ್ಪರಗಿ-೩೦೭೫ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೬೨,೩೭೪ ಪ್ರಕರಣವನ್ನು ಪೌತಿ-ವಾರಸಾ ಖಾತೆಗಾಗಿ ಗುರುತಿಸಲಾಗಿದೆ. ಪೌತಿ-ವಾರಸಾ ಆಂದೋಲನಾ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.