ಅಧಿಕಾರಿಗಳ ಮತ್ತು ಸದಸ್ಯರ ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

Jul 22, 2025 - 23:13
 0
ಅಧಿಕಾರಿಗಳ ಮತ್ತು ಸದಸ್ಯರ ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ
ನರೇಗಾ ಯೋಜನೆಯಡಿ ನಿರ್ಮಿಸಿದ ಅಮೃತ ಸರೋವರ & ತೆರೆದ ಬಾವಿಗೆ ಬಾಗಿನ ಅರ್ಪಣೆ ಹಾಗೂ ಗಂಗಾ ಪೂಜೆ ಕಾರ್ಯಕ್ರಮ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ತಿಕೋಟಾ : ತಾಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯತಿಯ ಧನ್ನರ್ಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ, ತೆರೆದ ಬಾವಿಯಲ್ಲಿ ಸಂಪೂರ್ಣ ನೀರು ತುಂಬಿರುವದರಿAದ ಆಯೋಜನೆ ಮಾಡಿದ ಬಾಗಿನ ಅರ್ಪಣೆ, ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಮಾತನಾಡಿದರು.
 ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದ್ದಲ್ಲಿ ಅಭಿವೃದ್ಧಿ ಕೆಲಸಗಳು ಅಷ್ಟೇ ಸರಳವಾಗಿ ಮುಗಿಯುತ್ತವೆ. ಈ ಗ್ರಾಮದಲ್ಲಿ ಅಧಿಕಾರಿಗಳು & ಸದಸ್ಯರು ತುಂಬಾ ಸಹಕಾರದಿಂದ ಕೆಲಸ ಮಾಡಿದ ಫಲವಾಗಿ ಇಂದು ಸಾರ್ವಜನಿಕರ ದಾಹ ನೀಗಿಸುವ ಎರಡು ಉತ್ತಮ ಕಾಮಗಾರಿಗಳು ಈ ಗ್ರಾಮದಲ್ಲಿ ಆಗಿವೆ. ಈ ಕಾಮಗಾರಿಗಳು ಮುಂದಿನ ದಿನಮಾನದಲ್ಲಿ ನಿಮ್ಮೆಲ್ಲರ ಹೆಸರನ್ನು ಅಜರಾಮರವಾಗಿ ಉಳಿಸುತ್ತವೆ, ಇದೇ ರೀತಿಯ ಹೆಚ್ಚೇಚ್ಚು ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಗ್ರಾಮ ಪಂಚಾಯತಿಯವರಿಗೆ ತಿಳಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪದ್ಮಿನಿ ಬಿರಾದಾರ ಮಾತನಾಡಿ “ಜಿಲ್ಲಾ ಪಂಚಾಯತಿ & ತಾಲೂಕು ಪಂಚಾಯತಿಯ ಅಧಿಕಾರಿಗಳ ಹಾಗೂ ಮನರೇಗಾ ಸಿಬ್ಬಂದಿಗಳ ಸಹಕಾರದಿಂದ ನಮ್ಮ ಗ್ರಾಮ ಪಂಚಾಯತಿಯಲ್ಲಿ ಈ ರೀತಿಯ ಉತ್ತಮ ಕಾಮಗಾರಿಗಳಾಗಿದ್ದು, ಇದರಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷರ & ಸದಸ್ಯರ ಶ್ರಮವು ಬಹಳಷ್ಟಿದೆ ಎಂದರು. ಈ ಎರಡು ಕಾಮಗಾರಿಗಳನ್ನು ಮನರೇಗಾ ಯೋಜನೆಯಡಿ ಕೈಗೊಂಡಿದ್ದು, ಪ್ರಸ್ತುತ ಸಂರ್ಪೂಣ ತುಂಬಿರವದರಿAದ ನಮ್ಮ ಕೆಲಸದ ಸಾರ್ಥಕತೆಯಿಂದ ತುಂಬಾ ತೃಪ್ತಿಯಾಗಿದೆ. ಸಾರ್ವಜನಿಕರು ನಮ್ಮ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿಲ್ಪಾ ಮಚೇಂದ್ರ ಹೊಸಮನಿ, ಉಪಾಧ್ಯಕ್ಷರಾದ ಮಾರುತಿ ಸಮಗಾರ (ಸಪ್ತಾಳಕರ), ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಂತ್ರಿಕ ಸಹಾಯಕ ಶ್ರೀಧರ ಸಾವಳಗಿ, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಅವಟಿ, ಬಾಲಕೃಷ್ಣ ಕದಂ, ಮಾರುತಿ ಬಂಡಿವಡ್ಡರ, ಬಸಪ್ಪ ತೇಲಿ, ಶ್ರೀಶೈಲ ವಳಸಂಗ, ಲಾಲಸಿಂಗ ಲಮಾಣಿ, ಗ್ರಾಪಂ ಕಾರ್ಯದರ್ಶಿ ಎಮ್.ಎಮ್.ಕೋಳಿ, ಗ್ರಾಮದ ಹಿರಿಯರಾದ ಕಾಶಿನಾಥ ಸಾವಂತ, ಅಮಗೊಂಡ ಗೋಳಸಂಗಿ, ದುಂಡಪ್ಪ ವಠಾರ, ಬಂದೆನವಾಜ ಮುಲ್ಲಾ, ಲಾಯಪ್ಪ ವಠಾರ, ಉಮೇಶ ತೇಲಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ರವಿ ಪವಾರ, ಶ್ರೀಶೈಲ ಶೆಡಬಾಳ, ಸುರೇಶ ಸಪ್ತಾಳಕರ ಕಾಯಕ ಮಿತ್ರ ಸಂಗೀತಾ ಸಪ್ತಾಳಕರ, ಸೇರಿ ಇತರರು ಹಾಜರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.