ಕಾಂಗ್ರೆಸ್ ಕಛೇರಿಯಲ್ಲಿ ಮಹಾತ್ಮಾ ಗಾಂಧೀಜಿ ಪುಣ್ಯಸ್ಮರಣೆ

ವಿಜಯಪುರ : ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ರಾಷ್ಟçಪಿತ ಮಾಹಾತ್ಮಾ ಗಾಂಧೀಜಿಯವರ ೭೭ ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಮಹಾತ್ಮಾ ಗಾಂಧೀಜಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಹಾತ್ಮಾ ಗಾಂಧೀಜಿ ವಿಶ್ವ ಕಂಡ ಶ್ರೇಷ್ಠ ಸಂತರು ಅವರ ವಿಚಾರಧಾರೆಗಳು ಸದಾಕಾಲಕ್ಕೂ ಸಲ್ಲುತ್ತದೆ ಎಂದರು.
ಭಾರತ ದೇಶದ ಸ್ವಾತಂತ್ರ ಸಂಗ್ರಾಮದ ನೇತೃತ್ವ ವಹಿಸಿಕೊಂಡಿದ್ದ ಗಾಂಧೀಜಿರವರು ತಮ್ಮ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಈ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟರು. ಭಾರತೀಯರ ಮೇಲೆ ಬ್ರಿಟೀಶರು ಅನೇಕ ರೀತಿಯ ಹಲ್ಲೆ ಮತ್ತು ದೌರ್ಜನ್ಯಗಳನ್ನು ಎಸಗುತ್ತಿದ್ದರೂ ಗಾಂಧೀಜಿಯವರು ಅಹಿಂಸೆಯ ಮಾರ್ಗವನ್ನು ಬಿಡಲಿಲ್ಲ. ಬ್ರಿಟೀಶರನ್ನು ಕೇವಲ ಕಲ್ಲುಗಳಿಂದ ಹೊಡೆದು ಓಡಿಸುವಷ್ಟೂ ಜನಬೆಂಬಲ ಮತ್ತು ಅಭಿಮಾನಿಗಳು ಗಾಂಧೀಜಿಯವರ ಬೆನ್ನಿಗಿದ್ದರು ಕೂಡಾ ಹಿಂಸೆಯ ಮಾರ್ಗವನ್ನು ಅನುಸರಿಸದೇ ಕೇವಲ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಈ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಮಹಾನ್ ಚೇತನವಾಗಿದ್ದಾರೆ. ಗಾಂಧೀಜಿಯವರ ಈ ಹೋರಾಟ ಜಗತ್ತಿನ ಇತಿಹಾಸದಲ್ಲೇ ಅಪರೂಪದ ಹೋರಾಟವೆಂದು ದಾಖಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಶ ಕಾಲೇಬಾಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಅಧ್ಯಕ್ಷೆ ಆರತಿ ಶಾಹಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ಮುಲ್ಲಾ, ಎಂ. ಎಂ. ಮುಲ್ಲಾ, ದೇಸು ಚವ್ಹಾಣ, ರಾಜೇಶ್ವರಿ ಚೋಳಕೆ, ಗಂಗೂಬಾಯಿ ಕಣಮುಚನಾಳ, ಶೋಭಾ ಬಿರಾದಾರ, ಕೃಷ್ಣಾ ಲಮಾಣಿ, ಭಾರತಿ ನಾವಿ, ತಾಜುದ್ದೀನ ಖಲೀಫಾ, ಎನ್. ಎಂ. ಮುಜಾವರ, ದಿಲೀಪ ಪ್ರಭಾಕರ, ಶಮೀಮಾ ಅಕ್ಕಲಕೋಟ, ಭಾರತಿ ಹೊಸಮನಿ, ಲಕ್ಷಿö್ಮÃ ಕ್ಷೀರಸಾಗರ, ಫಿರೋಜ ಶೇಖ, ಸುಜಾತಾ ಶಿಂಧೆ, ಹಮೀದಾ ಪಟೇಲ, ಸಂತೋಷ ಬಾಲಗಾವಿ, ಸರಿತಾ ನಾಯಕ, ಜಯಶ್ರೀ ಬಹನೂರ, ಕಾವ್ಯಾ ತೋಟಗಾರ, ಮೋಹನ ದಳವಾಯಿ, ಸತೀಷ ಅಡವಿ, ಅಶೋಕ ಕಾಂಬಳೆ, ಸವಿತಾ ವಗ್ಗರ, ಮಂಜುಳಾ ಗಾಯಕವಾಡ, ಮಹೇಶ ಶಾಪೂರ, ಲಕ್ಷಿö್ಮÃ ಕ್ಷೀರಸಾಗರ, ದೇವಾನಂದ ಲಚ್ಯಾಣ, ಇಜಾಜ ಮುಕ್ಬಿಲ್, ಪ್ರದೀಪ ಸೂರ್ಯವಂಶಿ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.