ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಶ್ರೀಮತಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.
ರವಿವಾರ ಪಟ್ಟಣದ ಕಾವ್ಯ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಕ್ಕಳು ದೇಶದ ಹೆಮ್ಮೆಯ ಪ್ರಜೆಗಳಾಗಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ನಾವೆಲ್ಲರೂ ಸ್ಮರಿಸೋಣ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ ತಮ್ಮ ಬಾಲ್ಯದಲ್ಲಿ ತಾವು ಕೂಡ ರಾಷ್ಟ್ರೀಯ ಹಬ್ಬಗಳಲ್ಲಿ ಈಗಿನ ಮಕ್ಕಳ ಹಾಗೆ ಸಡಗರ ಸಂಭ್ರಮದಿAದ ತಯಾರಾಗುತ್ತಿರುವುದನ್ನು ಮೆಲುಕು ಹಾಕಿದರು.
ಶ್ರೀಮತಿ ಶಕುಂತಲಾ ಹಿರೇಮಠ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸುಂದರವಾದ ಹಾಡಿನ ಮುಖಾಂತರ ಮಕ್ಕಳಿಗೆ ದೇಶಭಕ್ತಿಯ ಕುರಿತು ತಿಳಿಸಿದರು.
ಡಾ.ಪ್ರಶಾಂತ ಬಮ್ಮಣ್ಣಿ ದೇಶಭಕ್ತಿ ಗೀತೆಯನ್ನು ಹಾಡಿದರು. ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕಾಂಚನಾ ನಾಗರಬೆಟ್ಟ, ಪಂಚಮಸಾಲಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಎಂ ಹಂಗರಗಿ , ಪತ್ರಕರ್ತ ಮಲ್ಲಿಕಾರ್ಜುನ ಅಲ್ಲಾಪುರ, ಪ್ರಥಮ ದರ್ಜೆ ಗುತ್ತಿಗೆದಾರ ಆರ್. ಡಿ. ದೇಸಾಯಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಬಡಾನೂರ, ಕಾಲೇಜಿನ ಪ್ರಾಂಶುಪಾಲ ಸಂದೀಪ ಚಾಂದಕವಟೆ, ಮುಖ್ಯಗುರು ರಾಜು ಕಾಂಬಳೆ, ಶಿಕ್ಷಕ ವೃಂದ ಪಾಲಕರು ಮಕ್ಕಳು ಪಾಲ್ಗೊಂಡಿದ್ದರು. ಸಂದೀಪ ಚಾಂದಕವಟೆ ನಿರೂಪಿಸಿ ವಂದಿಸಿದರು.