ಕಲಬುರಗಿ: ಏಳನೇಯ ಸಣ್ಣ ನೀರಾವರಿ ಮತ್ತು ಎರಡನೇಯ ನೀರಿನಾಸರೆಗಳ ಗಣತಿಗಳ ಕಾರ್ಯವನ್ನು ಸಂಪೂರ್ಣ ಮಾಹಿತಿಯೊಂದಿಗೆ ಡಿಜಿಟಲ್ ಮೋಡ್ ಮೊಬೈಲ್ ಆ್ಯಪ್ಗಳÀಲ್ಲಿ ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯ ತರುನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏಳನೇಯ ಸಣ್ಣ ನೀರಾವರಿ ಮತ್ತು ಎರಡನೇಯ ನೀರಿನಾಸರೆಗಳ ಗಣತಿಗಳು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗಣತಿ ಕಾರ್ಯ ಮಾಡುವ ವಿಧಾನದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲ್ಲೂಕು ಮಟ್ಟದ ಮೇಲ್ವಿಚಾರಕರು, ತಹಶೀಲ್ದಾರು ಹಾಗೂ ಸಾಂಖ್ಯಿಕ ನಿರೀಕ್ಷಕರು ನಿಯಮಿತವಾಗಿ ಕ್ಷೇತ್ರ ಮೇಲ್ವಿಚಾರಣೆ ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣತಿಯ ಮೇಲ್ವಿಚಾರಣೆ ಮತ್ತು ದತ್ತಾಂಶಗಳ ಪರಿಶೀಲನೆ ಕಾರ್ಯವನ್ನು ವೆಬ್ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸಿ ಏಳನೇಯ ಸಣ್ಣ ನೀರಾವರಿ ಮತ್ತು ೨ನೇ ನೀರಿನಾಸರೆಗಳ ಗಣತಿಗಳ ಕಾರ್ಯದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು ಎಂದರು.
ಗ್ರಾಮದ ಎಲ್ಲಾ ಯೋಜನೆಗಳ ವಿವರಗಳು ಮತ್ತು ಗ್ರಾಮದ ಇತರೇ ವಿವರಗಳು ಸಂಪೂರ್ಣವಾಗಿ ಪ್ರಪತ್ರದಲ್ಲಿ ನಮೂದಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಕಾರ್ಯಕರ್ತರನ್ನಾಗಿ ತರಬೇತಿ ನೀಡಿ ಆದೇಶಸಲು ಸಣ್ಣ ನೀರಾವರಿ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಂತರ್ಜಲ ಯೋಜನೆಗಳನ್ನು ೪ ವಿಧಗಳಾಗಿ ಅಗೆದಬಾವಿ, ಅಳವಲ್ಲದ ಕೊಳವೆಬಾವಿ, ಮಧ್ಯಮ ಆಳದ ಕೊಳವೆಬಾವಿ ಮತ್ತು ಆಳದ ಕೊಳವೆಬಾವಿಗಳಾಗಿ ವರ್ಗಿಕರಿಸಲಾಗಿದೆ ಹಾಗೂ ನೀರಿನಾಸರೆಯ ವಿಧಗಳು, ಹೊಂಡಗಳು, ಸರೋವರಗಳು ಕೆರೆಗಳ, ಜಲಾಶಯಗಳು, ಜಲಸಂರಕ್ಷಣಾ ಯೋಜನೆಗಳಾಗಿವೆ ಎಂದರು
ಭಾರತ ಸರ್ಕಾರದ ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂರಕ್ಷಣ ಇಲಾಖೆಯ ಶೇ.೧೦೦ ರಷ್ಟು ಕೇಂದ್ರ ಪುರಸ್ಕೃತಿ " ಸಣ್ಣ ನೀರಾವರಿ ಅಂಕಿ-ಅAಶಗಳ ಸಮನ್ವಯೀಕರಣ " ಪ್ರತಿ ಐದು ವರ್ಷಗಳಿಗೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಗಣತಿ ಕಾರ್ಯಕ್ಕಾಗಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯು ಒಂದು ವೆಬ್ ಪೋರ್ಟ್ಲ್ ಅನ್ನು ರೂಪಿಸಿದೆ. ಈ ವೆಬ್ ಪೋರ್ಟಲ್ನಲ್ಲಿ ಜಿಲ್ಲಾ Useಡಿ ನೋಂದಾಯಿಸಿ Useಡಿ Iಜ ಮತ್ತು Pಚಿssತಿoಡಿಜ ಸೃಜಿಸಿ ಅದನ್ನು ಸಂಬAಧಿಸಿ ಅಧಿಕಾರಿಗಳಿಗೆ ನೀಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಸಾಂಖ್ಯ ಸಂಗ್ರಹಣಾಧಿಕಾರಿ, ಜಯಶ್ರೀ ಕರ್ಜಗಿ,ಕಾರ್ಯನಿರ್ವಾಹಕ ಅಭಿಯಂತರರು ನಾಗಣ್ಣ ಬಾವಿ, ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.