ಪುಣ್ಯಸ್ಮರಣೆ ಸಪ್ತಾಹಕ್ಕೆ ರೇವಣಸಿದ್ದೇಶ್ವರ ಶ್ರೀಗಳಿಂದ ಚಾಲನೆ : ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಹುತಾತ್ಮರ ೨೮ ನೇ ಪುಣ್ಯ ಸ್ಮರಣೋತ್ಸವ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಚಡಚಣ : ತಾಲೂಕಿನ ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜು. ೧೬ ರಿಂದ ೧೭ ರವರೆಗೆ ಎರಡು ದಿನಗಳ ಕಾಲ ಹುತಾತ್ಮರ ೨೮ ನೇಯ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಇಂದು ರಾತ್ರಿ ೯=೦೦ ಗಂಟೆಗೆ ಶ್ರೀಮಠದ ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹುತಾತ್ಮರ ಗದ್ದುಗೆಯ ಹಾಗೂ ದಾಸಬೋಧ ಪೂಜೆಯೊಂದಿಗೆ ಪುಣ್ಯಸ್ಮರಣೆ ಸಪ್ತಾಹಕ್ಕೆ ಚಾಲನೆ ನೀಡುವರು.
ಇಂದು ಸಂಜೆ ಅಭಿಷೇಕ ವಿಶೇಷ ಪೂಜೆ ಪುರಾಣ-ಪ್ರವಚನ, ರಾತ್ರಿ ಜಾಗರಣೆ ನಿಮಿತ್ಯ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿ0ದ ಭಜನಾ ಕಾರ್ಯಕ್ರಮ ನಡೆಯಲಿದೆ.
ನಾಳೆ ಬೆಳಿಗ್ಗೆ ೧೧=೦೦ ಗಂಟೆಗೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಭಜನಾಪದ, ಪುರಾಣ-ಪ್ರವಚನ ಪೂಜ್ಯ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಹುತಾತ್ಮರ ಪುಣ್ಯ ಸ್ಮರಣೋತ್ಸವ ಮಂಗಲಗೊಳ್ಳಲಿದೆ ಎಂದು ಶ್ರೀಮಠದ ಪರಮ ಶಿಷ್ಯ ಭಾರತೇಶ ಹಾಸಿಲಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.