ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೆ ಆಯ್ಕೆಯಾದ ಸಿಂಹದ ಹಾದಿ

ನಿಜವಾದ ದಾನ ಅಂದರೆ ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ತಿಳಿಯಬಾರದು. ಆದರೆ ಇಂದಿನ ಸೋಷಿಯಲ್ ಮಿಡಿಯಾದಲ್ಲಿ ದಾನ ಅನ್ನುವದು ತೋರಿಕೆಯಾಗಿದೆ. ಪರವಾಗಿಲ್ಲ ದಾನ ತೋರಿಕೆಗೆ ಮಾಡಿದ್ದರು ಸಹ ಹಸಿದವರ ಹೊಟ್ಟೆಯನ್ನು ತುಂಬಿಸಿದ್ದಂತು ನಿಜ. ಆದರೆ ಈ ಸೋಷಿಯಲ್ ಮಿಡಿಯಾದ ಗಾಳಿ ಬೀಸದ ಕಾಲದಲ್ಲಿ ಯಾವ ಫಲಾಪೆಕ್ಷೆಯಿಲ್ಲದೆ ದಾನ ಮಾಡಿದವರು ಇದಾರೆ. ಎಲ್ಲೂ ತಮ್ಮ ಹೆಸರು ಹೇಳಿಕೊಳ್ಳದೆ ದಾನ ಮಾಡಿದವರಲ್ಲಿ ನಮ್ಮ ಕನ್ನಡದ ಮೇರು ನಟ ಸಾಹಸ ಸಿಂಹ , ದಾದಾ ಎಂದೆ ಜನ ಪರಿಚಿತರಾದ ವಿಷ್ಣುವರ್ಧನ್ ಅವರು...
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದರೆ ಈ ಸಿಂಹದ ಹಾದಿ ಯ ಟೆಲಿಫಿಲ್ಮ್ ನ ನಾಯಕಿಯರು ವಿಷ್ಣುವರ್ಧನ್ ಅಭಿಮಾನಿಗಳು. ಅವರಿಂದ ಸಹಾಯ ಪಡೆದು ಅವರನ್ನೇ ಸ್ಮರಿಸುತಿರುವವರು ಒಬ್ಬರಾದರೆ. ಅವರಂತೆ ಯಾವ ಹೆಸರು ಕೀರ್ತಿ ಬಯಸದೆ ತಮ್ಮ ಕೈಲಾದಷ್ಟು ಸಹಾಯ ಮಾಡುವವರು ಮತ್ತೊಬ್ಬರು.
ಇದೊಂದು ನೈಜ ಘಟನೆಗಳನ್ನು ಒಳಗೊಂಡಂತ ಟೆಲಿಫಿಲ್ಮ್ . ಈ ಟೆಲಿಫಿಲ್ಮ್ ನ ನಿರ್ದೇಶಿಸಿದ ಶಶಿರಾಜ್ ದೊರೆ ಅವರು ಸ್ವತಃ ಅಭಿನಯಿಸಿದ್ದಾರೆ. ನಿರ್ದೇಶನದ ಜೊತೆಗೆ ನಟನೆಗು ಸೈ.. ಇನ್ನೂಳಿದಂತೆ ಪಾತ್ರ ವರ್ಗ ಹೀಗಿದೆ.
ನಿರ್ದೇಶನ : ಜಿಕೆ ಶಶಿ ರಾಜ್ ದೊರೆ
ನಿರ್ಮಾಪಕರು : ವೀರಕಪುತ್ರ ಶ್ರೀನಿವಾಸ್.
ತಾರಾಗಣ : ಸಾಯಿ ಜ್ಯೋತಿ ,ಸವಿತಕ್ಕ ,ಪಲ್ಲವಿ ರಾವ್, ಸಂಶಿಕ, ಪ್ರಕೃತಿ .
ಛಾಯಾಗ್ರಹಣ:ಕರಣ್ .
ಸಂಕಲನ : ಗೋವಿಂದ್ ವಿಷ್ಣು
ಸಂಗೀತ : ಸಂದೇಶ್ ಬಾಬಣ್ಣ ಧನಂಜಯ ವರ್ಮ ,ಶಿವ ಪ್ರಸಾದ್.
ಇನ್ನೊಂದು ಮುಖ್ಯ ವಿಷಯ ಏನೆಂದರೆ,
" ನಮ್ಮ " ಸಿಂಹದ ಹಾದಿ " ಟೆಲಿ ಮೂವಿ
ಅಫೀಷಿಯಲ್ಲಿ ಸೆಲೆಕ್ಟೆ ಆಗಿದೆ " ದಾದಾ ಸಾಹೇಬ್ ಫಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ " (2025) ಶಶಿ ರಾಜ್ ದೊರೆ ಶ್ರಮಕ್ಕೆ ಫಲ ಸಿಕ್ಕ ಹಾಗೆ . ಇದು ಹೆಮ್ಮೆಯ ವಿಷಯ . ಇನ್ನೂ ನಿರ್ಮಾಣ ಮಾಡಲು ಮುಂದೆ ಬಂದ " ವೀರಕ ಪುತ್ರ ಶ್ರೀನಿವಾಸ್ " sir ಗೆ ಥ್ಯಾಂಕ್ಸ್ ಹೇಳಲೆ ಬೇಕು ವಿಷ್ಣುವರ್ಧನ್ ಅಭಿಮಾನಿಗಳಾದ ನಾವೆಲ್ಲರು. ವಿಷ್ಣು ಸೇನಾ ಸಮಿತಿ ಕಟ್ಟಿ ಬೆಳೆಸಿದ ವೀರಕಪುತ್ರ ಶ್ರೀನಿವಾಸ್ ಅವರಿಗೆ ಕೃತಜ್ಞತೆ ಸಲ್ಲಲೆಬೇಕು..
ಕಥೆಯ ಮುಖ್ಯ ತಿರುಳು ಏನೆಂದರೆ " ಸಿಂಹದ ಗುಹೆಯತ್ತ ಸಾಗಿದ ಈ ಚಿತ್ರದ ನಾಯಕಿಯರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ನೋವು ಅವಮಾನ ಎದುರಿಸಿ ನಿಂತು. ಹೆಣ್ಣು ಮನಸ್ಸು ಮಾಡಿದರೆ ಒಮ್ಮೆ ಧೈರ್ಯದಿಂದ ಹೆಜ್ಜೆ ಇಟ್ಟರೆ ಅವಳು ಕೂಡ ಸಮಾಜದ ಮುಂದೆ ದೈರ್ಯವಾಗಿ ಸಾಧಿಸಿ ನಿಲ್ಲಬಹುದು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ"
ಏನು ಆ ಕಥೆ ಅಂತಿರಾ ಬನ್ನಿ ನೋಡೋಣ. ನಮ್ಮ ಈ ಚಿತ್ರದಲ್ಲಿ ಮುಖ್ಯ ನಾಯಕಿ ಪ್ರಾರ್ಥನಾ ಒಬ್ಬ ಲೇಖಕಿ . ವಿಷ್ಣುವರ್ಧನ್ ಅವರ ಬಗ್ಗೆ ಯಾರಾದರು ಹಗುರವಾಗಿ ಮಾತನಾಡಿದರೆ ಸಿಡಿದೇಳುವ ಮಂಗಳಮುಖಿ ಜೆನ್ನಿ ಒಬ್ಬ ಫೋಟೋಗ್ರಾಫರ್. ಯೋಧ ಮಗನನ್ನು ಕಳೆದುಕೊಂಡು ಆ ನೋವಿನಲ್ಲು ಬದುಕುವ ಇನ್ನೊಬ್ಬ ನಾಯಕಿ ನಂಜಮ್ಮಾ . ಇವರೆಲ್ಲರ ನಡುವೆ ಕಾಫಿ ಮಾರುವ ಕುಳ್ಳ ಮಂಜು .
ಹೆತ್ತವರಿಲ್ಲದ ಪ್ರಾರ್ಥನಾ ನ ಬದುಕಿನಲ್ಲಿ ಕಣ್ಣೀರು ಒಂದೆ ತುಂಬಿತ್ತು . ನರರಾಕ್ಷಸನಂತ ಮಾವನಿಂದ ತಪ್ಪಿಸಿಕೊಂಡು ಓಡಿದ ಪುಟ್ಟ ಪ್ರಾರ್ಥನಾಗೆ ಸಿಕ್ಕಿದ್ದು ಮಾನವೀಯತೆಯ ಹೃದಯವುಳ್ಳ ವಿಷ್ಣುವರ್ಧನ್ ಅಭಿಮಾನಿ. ವಿಷ್ಣುವರ್ಧನ್ ಅಭಿಮಾನಿ ಆಗಿದ್ದರೆ ಸಾಲದು ಅವರಲ್ಲಿ ಇರುವ ಒಂದು ಗುಣ ಆದರು ಇರಲೆ ಬೇಕು ಆಗಲೇ ಅಭಿಮಾನಿ ಆಗಿದ್ದಕ್ಕೂ ಸಾರ್ಥಕ. ಇಲ್ಲಿ ಈ ಹೃದಯವಂತ ಆ ಹೃದಯವಂತನಷ್ಟೆ ವಿಶಾಲ ಮನಸ್ಸಿನವನು. ಪ್ರಾರ್ಥನಾಳನ್ನು ಆಶ್ರಮಕ್ಕೆ ಸೇರಿಸಿ ಯಾರು ಇಲ್ಲದ ಪ್ರಾರ್ಥನಾನ ಬದುಕಿಗೆ ದಾರಿ ದೀಪ ಆದವನು..
ಅನಾಥಾಶ್ರಮದಲ್ಲಿ ಓದುತ್ತಾ ಬೆಳೆದ ಪ್ರಾರ್ಥನಾ ಅದೇ ಆಶ್ರಮಕ್ಕೆ ಬಂದು ಹೋಗುತಿದ್ದ ವಿಷ್ಣುವರ್ಧನ್ ಅವರನ್ನು ಸ್ಪೂರ್ತಿಯಾಗಿ ತಗೆದುಕೊಂಡು. ಮುಂದೆ ತನ್ನ ಬದುಕಿನ ದಾರಿಯಲ್ಲಿ ವಿಷ್ಣುವರ್ಧನ್ನಂತೆ ನೊಂದವರಿಗೆ ಕೈಲಾದ ಸಹಾಯ ಮಾಡುತಿದ್ದಳು..
ಕಾಡಿನ ಹಾದಿಯಲ್ಲಿ ಇರುವ ಸಿಂಹಾಪುರಕ್ಕೆ ಹೊರಟ ಪ್ರಾರ್ಥನಾ ಗೆ ಜೆನ್ನಿ ಜೊತೆಯಾದರೆ . ಸಿಂಹಾಪುರದ ದಾರಿ ತೋರುವವನು ಮಂಜು. ಸಿಂಹಾಪುರದ ಸಂಜುನ ಮನೆಯತ್ತ ಪ್ರಾರ್ಥನಾ ಹಾಗು ಜೆನ್ನಿ ಪ್ರಯಾಣ ಮಾಡಿದ್ದು ಯಾಕೆ..? ತಮ್ಮದೇ ಬೇರೆ ಬೇರೆ ದಾರಿಯಿಲ್ಲ ಇದ್ದ ಪ್ರಾರ್ಥನಾ, ಜೆನ್ನಿ, ನಂಜಿ, ಮಂಜ ಜೊತೆಯಾಗಿದ್ದು ಎಲ್ಲಿ.? ಹೇಗೆ .? ಪ್ರಾರ್ಥನಾ ಅವರು ಬರೆದ ಪುಸ್ತಕ ಯಾವುದು ಎಲ್ಲವನ್ನೂ ತಿಳಿಯಬೇಕು ಎಂದರೆ ವೀರಕಪುತ್ರ ಶ್ರೀನಿವಾಸ ನಿರ್ಮಾಣದಲ್ಲಿ ಮೂಡಿ ಬಂದ ಸಿಂಹದ ಹಾದಿ ಟೆಲಿಫಿಲ್ಮ್ ನೋಡಲೆ ಬೇಕು.