ಶಶಿಕಾಂತರ ‘ತಂತ್ರ’ಕ್ಕೆ ಯು/ಎ ಸರ್ಟಿಫಿಕೇಟ್

Jan 11, 2025 - 22:45
 0
ಶಶಿಕಾಂತರ ‘ತಂತ್ರ’ಕ್ಕೆ ಯು/ಎ ಸರ್ಟಿಫಿಕೇಟ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರ : ಸಿಲ್ವರ್‌ಸ್ಕೆöÊ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ಬೆಂಗಳೂರ  ನಿರ್ಮಿಸುತ್ತಿರುವ   ಕುತೂಹಲಭರಿತ ಹಾರರ್ ಕಥಾ ಹಂದರ ಹೊಂದಿರುವ   ‘ತಂತ್ರ' ಎಂಬ ಹೆಸರಿನ ಚನಲಚಿತ್ರಕ್ಕೆ ಸೆನ್ಸಾರ್ ಮಂಡಳಿಯಿAದ ಯು/ಎ ಸರ್ಟಿಫಿಕೇಟ್ ದೊರೆತಿದೆ.  
     ಬೆಂಗಳೂರು ಜೊತೆಗೆ ಕಿತ್ತೂರ ಕರ್ನಾಟಕದ ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರದ ಚಿತ್ರೀಕರಣ  ನಡೆಸಲಾಗಿದೆ.    ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಕಲಾವಿದ ಮಾಳು ನಿಪನಾಳ ಹಾಡಿದ  ‘ಜಾತ್ರೆ ಹೊಂಟೈತಿ’ ಹಾಡು  ಮೂರು ಲಕ್ಷ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.   ಈ ಚಿತ್ರದಲ್ಲಿ  ನಾಯಕರಾಗಿ, ನಿರ್ಮಾಪಕರಾಗಿರುವ ವಿಜಯಪುರದ ಶಶಿಕಾಂತ್ ಈಗಾಗಲೇ ಹಲವಾರು ಕಿರುಚಿತ್ರಗಳು, ಆಲ್ಬಂಗಳನ್ನು ನಿರ್ಮಿಸಿದ್ದಲ್ಲದೆ ೨ಸಾವಿರಕ್ಕೂ ಹೆಚ್ಚು ನೃತ್ಯಪಟುಗಳಿಗೆ ನೃತ್ಯವನ್ನು ಕಲಿಸಿದ ನೃತ್ಯ ನಿರ್ದೇಶಕರು ಮತ್ತು ಎಂಬಿಎ ಪದವೀಧರÀರು.    ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಹಾಗೂ ಎರಡನೇ ನಾಯಕನಾಗಿ ನಟ ವಿಕ್ರಾಂತ್  , ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸುತ್ತಿದ್ದಾರೆ . ಪಾರು ದಾವಣಗೆರೆ ಒಂದು ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ . ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ನಟಿಸಿ ಗಮನ ಸೆಳೆದಿದ್ದಾರೆ . ಅಲ್ಲದೆ ಸಂತೋಷ್ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ .
    ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ,ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ನಿರ್ದೇಶನ-ರಮೇಶ್ ಕೃಷ್ಣ , ರೋಹನ್ ದೇಸಾಯಿ ,  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಖ್ಯಾತ ಗಾಯಕರಾದ ರಾಜೇಶಕೃಷ್ಣ   ‘ಓಂ ನಮೋ’ ಎಂಬ ಹಾಡನ್ನು ಹಾಡಿದ್ದಾರೆ.  ಮೂರು ಹಾಡುಗಳಿಗೆ  ಮಾಳು ನಿಪನಾಳ,  ಪ್ರಣತಿ ರಾವ್, ಆರಿಫ್ ಅಸ್ಲಾಂ , ಮೇಘನಾ ಕುಲಕರ್ಣಿ       ಧ್ವನಿ ನೀಡಿದ್ದಾರೆ, ಸಂಕಲನ ಮತ್ತು ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ವಿಜಯಪುರದ ನಟರಾಜ ಎಂದೆ ಖ್ಯಾತರಾದ ಶಶಿಕಾಂತ್ ಪಿ ನಾಟಿಕರ್ ನಟಿಸಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಸಹ ನಿರ್ದೇಶನ   ಸಾಮ್ರಾಟ ಶ್ರೀನಿವಾಸ.ಎಸ್.ಸಿ, ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ(ರಾಯದುರ್ಗ),ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ,ಈ ಮೊದಲೇ ಶಂಖನಾದ ಚಲನಚಿತ್ರ  ನಿರ್ದೇಶಿಸಿದ್ದ ಗುಳೇದಗುಡ್ಡದ  ವಿಶ್ವನಾಥ   ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಸಧ್ಯದಲ್ಲೇ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡುವ ಕುರಿತು ಚಿತ್ರತಂಡ ತಯ್ಯಾರಿ ನಡೆಸಿದೆ.     

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.