ಜ.೨೪ಕ್ಕೆ "ಶಿವಯೋಗಿ ಶ್ರೀ ಸಿದ್ದರಾಮೇಶ್ವರ" ಚಿತ್ರ ಬಿಡುಗಡೆ

Jan 21, 2025 - 23:09
 0
ಜ.೨೪ಕ್ಕೆ "ಶಿವಯೋಗಿ ಶ್ರೀ ಸಿದ್ದರಾಮೇಶ್ವರ" ಚಿತ್ರ ಬಿಡುಗಡೆ

ಹುಬ್ಬಳ್ಳಿ : ಓಂಕಾರ ಮೂವೀಸ್ ಬೆಂಗಳೂರ ಅವರ  ಶ್ರೀಮತಿ ಸುಜಾತ ರಾಜ್ ಕುಮಾರ್ ಅರ್ಪಿಸುವ ಪುರುಷೋತ್ತಮ್ ಓಂಕಾರ್ ಸ್ವಾಮಿಯವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದಿರುವAತಹ "ಶಿವಯೋಗಿ ಶ್ರೀ ಸಿದ್ದರಾಮೇಶ್ವರ" ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಟಿ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ  ಜರುಗಿತು.             

ಈ ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆಯಾದ ರಾವಣ ಕತ್ತಿಯವರು ಸಿದ್ದರಾಮೇಶ್ವರನಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ  ಒಂದು ಪೌರಾಣಿಕ ಕಥೆಯನ್ನು ಈಗಿನ ಕಾಲದ ತಾಂತ್ರಿಕತೆಯೊAದಿಗೆ ಸಿದ್ಧಪಡಿಸಲಾಗಿದ್ದು ಸಿದ್ದರಾಮೇಶ್ವರ ಪವಾಡಗಳೊಂದಿಗೆ ಮನರಂಜನೆಯನ್ನು  ಹೊಂದಿದೆ.ಈಗಿನ ಕಾಲದ ಜನರಿಗೆ ಶರಣರ ಸಂಗತಿಗಳನ್ನು ಮನರಂಜನಾತ್ಮಕವಾಗಿ ಮುಟ್ಟಿಸಲು ಎನ್.ಎಸ್ ರಾಜಕುಮಾರ್ ಅವರು ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು ಹಾಗೂ ಸಹ ನಿರ್ಮಾಪಕರಾಗಿ.ಜೆ.ಕೆ. ಸುನಿಲ್ ಕುಮಾರ್  ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಎರಡು ಹಾಡುಗಳು ಹಾಗೂ ನಾಲ್ಕು ವಚನಗಳಿದ್ದು  ಚಿತ್ರಕ್ಕೆ ಸಂಗೀತ ಸಂಯೋಜನೆ  ರಾಜ್ ಭಾಸ್ಕರ್ ಮಾಡಿದ್ದಾರೆ.                      

ಛಾಯಾಗ್ರಹಣ ಗೌರಿ ವೆಂಕಟೇಶ್,ಚಿತ್ರದ ಎಡಿಟಿಂಗ್ ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಕೆಲಸವನ್ನು ಆರ್.ಅನಿಲ್ ಕುಮಾರ್ , ಪತ್ರಿಕಾಸಂಪರ್ಕ ಡಾ. ಪ್ರಭು ಗಂಜಿಹಾಳ,  ಡಾ.ವೀರೇಶ್ ಹಂಡಗಿ ಅವರದಿದೆ. ಮುಖ್ಯತಾರಾಗಣದಲ್ಲಿ ರಾವಣ ಕತ್ತಿ. ಗಣೇಶ್ ರಾವ್ ಕೇಸರಕರ್, ನಾಗೇಂದ್ರ ಅರಸು,ಬಸವರಾಜ್ ರಕ್ಷಾಗೌಡ , ಅನ್ನಪೂರ್ಣ, ಪ್ರಮೀಳಾ ಸುಬ್ರಹ್ಮಣ್ಯ  ,ಬಾಲಕ ಸಿದ್ದರಾಮನಾಗಿ ಮಾ.ಸಮರ್ಥ, ಬಸವರಾಜ  ಮುಂತಾದವರು ಅಭಿನಯಿಸಿದ್ದಾರೆ.        

ಈ ಚಿತ್ರವು ಇದೆ ಜ. ೨೪ರಂದು  ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.                

ಪತ್ರಿಕಾ ಮಾಧ್ಯಮ ಹಾಗೂ ಪ್ರೇಕ್ಷಕ ಪ್ರಭುಗಳು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದು  ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಹೇಳಿದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.