ಅಂಬಿಗರ ಚೌಡಯ್ಯ ನಿರ್ಭಿತ ವಚನಗಳಿಂದ ಪ್ರಖ್ಯಾತ : ರಾಜುಗೌಡ

ವಿಜಯಪುರ: ಅಂಬಿಗರ ಚೌಡಯ್ಯ ನಿಜನುಡಿಗಳಿಂದ ಪ್ರಖ್ಯಾತ ವಚನಕಾರರಾದವರು. ನೇರ ನಿರ್ಭಿತ ವಚನಗಳನ್ನು ರಚಿಸುವ ಮೂಲಕ ಲೋಕದ ಡೊಂಕುಗಳನ್ನು ತಿದ್ದಿದವರು ಎಂದು ಹಿಟ್ಟಿನಹಳ್ಳಿ ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಜುಗೌಡ ಕಳಸಗೊಂಡ (ಉತ್ನಾಳ) ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಜರುಗಿದ ಅಂಬಿಗರ ಚೌಡಯ್ಯ ದಿನಾಚರಣೆಯಲ್ಲಿ ಮಾತನಾಡುತ್ತ ಸಮಾಜಿಕ ಕಂದಾಚಾರಗಳನ್ನು ದಿಕ್ಕರಿಸಿ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಹಿಟ್ಟಿನಹಳ್ಳಿ ಪಿ ಕೆ ಪಿ ಎಸ್ ವಿಶ್ರಾಂತ ಮ್ಯಾನೆಜರ ಮಾತನಾಡಿ ಹನ್ನೇರಡನೆಯ ಶತಮಾನದ ಶಿವಶರಣರಲ್ಲಿ ಅಂಬಿಗರ ಚೌಡಯ್ಯ ಪ್ರಖ್ಯಾತರು.ಉಳಿದೆಲ್ಲ ವಚನಕಾರಗಿಂತ ಭಿನ್ನ ಹಾಗು ವಿಶೇಷ ವ್ಯಕ್ತಿತ್ವ ಇವರದು. ವಿಶ್ವಗುರು ಬಸವಣ್ಣನ ಸಮಕಾಲೀನ ಶರಣರಾದ ಅಂಬಿಗರ ಚೌಡಯ್ಯ ತತ್ವನಿಷ್ಟ ಶ್ರೇಷ್ಠ ತತ್ತ್ವಜ್ಞಾನಿಯಾಗಿ ಪ್ರಸಿದ್ಧರಾಗಿದ್ದಾರೆಂದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕಂಡದ್ದನ್ನು ಕಂಡAತೆ ಹೇಳುವ ವಚನಕಾರ ಅಂಬಿಗರ ಚೌಡಯ್ಯ ವೈಚಾರಿಕತೆ ,ಏಕದೇವೋಪಾಸನೆ, ಇಷ್ಠಲಿಂಗ ನಿಷ್ಟೆ,ನೈತಿಕ ಮೌಲ್ಯ ವಚನಗಳು, ಆಧ್ಯಾತ್ಮಿಕತೆ, ವಿಡಂಬನೆಯ ವಿಶೇಷತೆಗಳನ್ನು ನಿಜಶರಣರ ವಚನಗಳಲ್ಲಿ ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ, ರವಿ ಬೆನಕಟ್ಟಿ, ದುಂಡಪ್ಪ ಬಗಲಿ, ಜಗನ್ನಾಥ ಚೌಧರಿ, ವಿಠ್ಠಲ ಸಾರವಾಡ ಮುದಸ್ಸರ ವಾಲಿಕಾರ. ಸುಭಾಷ ಯಂಭತ್ತನಾಳ, ಸಿದ್ರಾಮ ವಾಲಿಕಾರ, ಭೀಮನಗೌಡ ಬಿರಾದಾರ, ಮಹಮ್ಮದ ವಾಲಿಕಾರ. ಸಂತೋಷ ಲಮಾಣಿ ಹುಸೇನ ವಾಲಿಕಾರ, ಅಪ್ಪು ನಾಟೀಕಾರ, ಮಜರ ವಾಲಿಕಾರ, ಸತೀಶ ಚೌಧರಿ, ಸಿದ್ದನಗೌಡ ಬಿರಾದಾರ, ಸಂಗಮೇಶ ಕವಡಿಮಟ್ಟಿ, ಮಹಾಂತೇಶ ಪಡನಾಡ, ದಾನಪ್ಪ ಸಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.