ಗಾಂಜಾ ಕಳ್ಳಭಟ್ಟಿ ಸಾರಾಯಿ ವಶ : ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

Feb 2, 2025 - 01:24
Feb 2, 2025 - 01:33
 0
ಗಾಂಜಾ ಕಳ್ಳಭಟ್ಟಿ ಸಾರಾಯಿ ವಶ :  ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

ವಿಜಯಪುರ: ನಗರದಲ್ಲಿ ಗಾಂಜಾ ಮತ್ತು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಇವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 60.000/- ಮೌಲ್ಯದ 600 ಗ್ರಾಂ, ದಷ್ಟು ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಫೊಲೀಸರು ವಶಕ್ಕೆ ಪಡೆದಿದ್ದಾರೆ.


ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ ನಿಂಬರಗಿ, ಅವರು ಶನಿವಾರ ಮಾಹಿತಿ ನೀಡಿದ್ದು, ದಿನಾಂಕ: 01.02.2025 ರಂದು ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹರಣಶಿಖಾರಿ ಕಾಲೊನಿಯಲ್ಲಿ ಆಕ್ರಮವಾಗಿ ಗಾಂಜಾ ಹಾಗೂ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಸುನೀಲ ಕಾಂಬಳೆ, ಡಿಎಸ್‌ಪಿ ಸಿಇಎನ್, ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್, ರಮೇಶ ಆವಜಿ, ಪಿಐ ಸಿಇಎನ್, ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ರವರ ನೇತೃತ್ವದಲ್ಲಿ, ಗೋಲಗುಂಬಜ್ ಠಾಣೆಯ ಪಿಎಸ್‌ಐ ಎಂ.ಡಿ ಫೋರಿ, ಎಚ್.ಡಿ ವಾಲಿಕಾರ, ಆದರ್ಶನಗರ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಜನರು ಹರಣಶಿಖಾರಿ ಕಾಲೋನಿಯಲ್ಲಿ ದಾಳಿ ನಡೆಸಿ ಅನಧೀಕೃತವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿತರಾದ
ಆನಂದ ಮೊಹನ ಚವ್ಹಾಣ, 37 ವರ್ಷ, ಸಾ: ಹರಣತಿಕಾರಿ ಕಾಲೋನಿ, ವಿಜಯಪು,   ರಿಯಾಜ ಅಬ್ದುಲ್ ನರಸಣಗಿ, 23 ವರ್ಷ, ಸಾ: ಚಪ್ಪರಬಂದ ಓಣಿ, ರಿಮ್ಯಾಂಡ ಹೊಮ್ ಹತ್ತಿರ, ವಿಜಯಪುರ ಇವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 60.000/- ಮೌಲ್ಯದ 600 ಗ್ರಾಂ, ದಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳಭಟ್ಟಿ ಸಾರಾಯಿಮಾರಾಟ ಮಾಡುತ್ತಿದ್ದ ಹರಣಶಿಕಾರಿಯ ವಾಸು ರಾಜು ಚವ್ಹಾಣ, 25 ವರ್ಷ, ಈತನಿಂದ ಸುಮಾರು 110 ಲೀಟ‌ರ್ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆಯಲಾಗಿದೆ.


ಈ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಹಾಗೂ ಅಬಕಾರಿ ಕಾಯ್ದೆ ಅಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಎಸ್ಪಿ ಲಕ್ಷ್ಮಣ  ಬಿ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.