ಅಂಜುಮನ್ ಸಂಸ್ಥೆಯ ಘನತೆ ಹೆಚ್ಚಿಸಿ : ರಹೀಂ ಮುಲ್ಲಾ

ಮುದ್ದೇಬಿಹಾಳ : ಕೆಲವು ವರ್ಷಗಳ ಹಿಂದೆ ಅಂಜುಮನ್ ಸಂಸ್ಥೆಗೆ ಮಹತ್ವದ ಸ್ಥಾನ ಸಮಾಜದಲ್ಲಿತ್ತು.ಆದರೆ ಆ ಘನತೆ ಕುಂದಿದೆ.ಮತ್ತೆ ಮೊದಲಿನ ವೈಭವವನ್ನು ಅಂಜುಮನ್ ಸಂಸ್ಥೆಗೆ ತರುವಲ್ಲಿ ಹಿಂದಿನ ಹಳೆಯ ವಿದ್ಯಾರ್ಥಿಗಳು, ಯುವಕರು ಮುಂದಾಗಬೇಕು ಎಂದು ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕ ಪ್ರೊ.ಅಬ್ದುಲ್ರಹೀಂ ಮುಲ್ಲಾ ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಶನಿವಾರ 1998-99ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಜುಮನ್ ಸಂಸ್ಥೆಯಲ್ಲಿ ಕಲಿಯಬೇಕಾದ ಮಕ್ಕಳು ಬೇರೆ ಕಡೆಗೆ ಓದುವಂತಾಗಿದೆ.ಮುಸ್ಲಿA ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಅಂಜುಮನ್ ಕಮೀಟಿ ರಚನೆಯಾಗುವುದಕ್ಕೆ ಪ್ರಜ್ಞಾವಂತರು ಮುಂದಾಗದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.
ಅಂಜುಮನ್ ಕಾಲೇಜಿನ ನಿವೃತ್ತ ಮುಖ್ಯಗುರು ಎಂ.ಡಿ.ಝರತಾರಘರ ಮಾತನಾಡಿ, ನಮ್ಮ ಮನೆಗೆ ಬೆಂಕಿ ಬಿದ್ದಾಗ ಅದನ್ನು ಉಳಿಸಿಕೊಳ್ಳುವ ಕೆಲಸಕ್ಕೆ ನಾವು ಮುಂದಾಗಬೇಕೇ ಹೊರತು ಬೇರೆಯವರು ಬರುವುದಿಲ್ಲ. ಅಂಜುಮನ್ ಕಮಿಟಿ ಅಧ್ಯಕ್ಷ ಸ್ಥಾನ ಖಾಲಿ ಬಿದ್ದಿದೆ. ಅದನ್ನು ತುಂಬುವ ಕೆಲಸ ಯುವಕರು, ಪ್ರಜ್ಞಾವಂತ ಮುಸ್ಲಿಂ ಸಮಾಜದ ಮುಖಂಡರಿAದಾಗಬೇಕು.ಯಾರಿಗೆ ಆರೋಗ್ಯ ಹದಗೆಟ್ಟಿದೆಯೋ ಅವರೇ ಮದ್ದು ಕುಡಿಯಬೇಕು ಎಂದರು.
ನಿವೃತ್ತ ಶಿಕ್ಷಕ ಎಸ್.ಬಿ.ಜಹಾಗೀರದಾರ ಮಾತನಾಡಿ, ಹಳೆಯ ವಿದ್ಯಾರ್ಥಿ ಅಸ್ಲಂ ಕಿತ್ತೂರು ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಸುವರ್ಣ ಅಕ್ಷರದಿಂದ ಬರೆಯಬೇಕಾಗುತ್ತದೆ.ಕಲಿಸಿದ ಗುರುಗಳನ್ನು ಗೌರವಿಸುವ ಸಂಪ್ರದಾಯ ಹಾಕಿಕೊಟ್ಟಿರುವ ಹಳೆಯ ವಿದ್ಯಾರ್ಥಿಗಳ ನಡೆದ ಮಾದರಿಯಾದದ್ದು ಎಂದರು.
ಅಧ್ಯಕ್ಷತೆಯನ್ನು ಮೌಲಾನಾ ನಿಸಾರಅಹ್ಮದ್ ಜಾಮಯಿ ವಹಿಸಿದ್ದರು. ಮುಖ್ಯ ಅಥಿತಿಯಾಗಿ ಸಂಘಟನಾ ಕಾರ್ಯದರ್ಶಿ ಜನಾಬ ಮಹ್ಮದ್ಅಸ್ಲಮ ಕೆ. ಕಿತ್ತೂರ,ನಿವೃತ್ತ ಶಿಕ್ಷಕರಾದ
ಎಲ್. ಎಲ್. ಮೂಲಿಮನಿ, ಎಸ್.ಬಿ.ಜಾಗೀರದಾರ, ಎಂ.ಎ.ಬಾಗವಾನ, ಎಸ್.ಎಚ್. ದಖನಿ,ಎ. ಕೆ.ನಂದವಾಡಗಿ, ಎಂ. ಆರ್. ಕಲಾದಗಿ, ಎಸ್.ಆಯ್.ಅತ್ತಾರ, ಎಚ್.ಎಂ.ಮೋಮಿನ,ಎಂ ಎಂ ಶಾಪೂರ ಇದ್ದರು. ಎಸ್.ಐ.ಹಿರೇಮಠ ಸ್ವಾಗತಿಸಿದರು. ಶಬಾನಾ ಮುದ್ನಾಳ ನಿರೂಪಿಸಿದರು. ವಿ.ಮೋಮಿನ ವಂದಿಸಿದರು.
ಹಳೆಯ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಿದರು.