ಪುಸ್ತಕ ಸಂತೆ ಪ್ರಾರಂಭವಾಗಲಿ : ಡಾ.ವಿಷ್ಣು ಶಿಂಧೆ 

Feb 3, 2025 - 11:09
Feb 3, 2025 - 11:09
 0
ಪುಸ್ತಕ ಸಂತೆ ಪ್ರಾರಂಭವಾಗಲಿ : ಡಾ.ವಿಷ್ಣು ಶಿಂಧೆ 

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತು ಸಮುದಾಯದ ಸಹಭಾಗಿತ್ವದಲ್ಲಿ  ಪುಸ್ತಕ ಸಂತೆಗಳು ನೆರವೇರಲಿ. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿರುವ  ಸಂದರ್ಭದಲ್ಲಿ  ಓದುಗರ ಸಂಖ್ಯೆಯನ್ನು  ಹೆಚ್ಚಿಸುವ ಕಾರ್ಯಕ್ಕೆ  ಮಹತ್ವ ನೀಡಬೇಕೆಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ  ಡಾ.ವಿಷ್ಣು ಶಿಂಧೆ ಅಭಿಪ್ರಾಯ ವ್ಯಕ್ತಪಡಿಸಿದರು. 

ರವಿವಾರ  ಜಿಲ್ಲಾ ತಾಲೂಕ ಹಾಗೂ ನಗರ ಘಟಕದ ಆಶ್ರಯದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ  ಜರುಗಿದ ಡಾ.ಜಯದೇವಿ ಗಾಯಕವಾಡ ರವರ ಸಾಕಿ ಕೇಳಿದ ರುಬಾಯಿಗಳು ಕೃತಿ  ಲೋಕಾಪ೯ಣೆ ಹಾಗೂ ದಿ.ಗುರುಬಾಯಿ ಬಸನಗೌಡ ಪಾಟೀಲ ದತ್ತಿ ಹಾಗೂ ಸಿಂಪಿ ಲಿಂಗಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರುಬಾಯಿಗಳಂತ ವಿಶಿಷ್ಟ ಸಾಹಿತ್ಯಿಕ ಕೃತಿಗಳು ಹೊರಗೆ ಬರುತ್ತಿರುವದು ಸಂತೋಷದಾಯಕ. ರುಬಾಯಿಗಳೆಂದರೆ  ಇದು ಚೌಪದಿಗೆ ಸಮಾನ. ಇಲ್ಲಿ ಅಂತ್ಯ ಪ್ರಾಸಕ್ಕೆ ಹೆಚ್ಚಿನ ಆದ್ಯತೆ ಎಂದರು. 

ಕೃತಿಯನ್ನು  ಪರಿಚಯಿಸಿದ ಡಾ.ಮಾಧವ ಗುಡಿ ಕನ್ನಡದಲ್ಲಿ ರುಬಾಯಿಗಳನ್ನು  ಬರೆಯುವದರ ಮೂಲಕ ಡಾ.ಜಯದೇವಿ ಗಾಯಕವಾಡ ಅವರು ಪ್ರಥಮ ಕವಯಿತ್ರಿಯಾಗಿದ್ದಾರೆಂದರು.  ಬಡತನ.ದೌರ್ಜನ್ಯ.  ಹೆಣ್ಣಿನ ಅಸಹಾಯಕತೆ ಕಾವ್ಯದ ವಸ್ತುಗಳಾಗಿವೆ ಎಂದರು.

ಗುರುಬಾಯಿ ಬಸನಗೌಡ ಪಾಟೀಲ ದತ್ತಿ ವಿಷಯ ಆಧುನಿಕ ಕೃಷಿ ಅವಿಷ್ಕಾರ ಕುರಿತು ಉಪನ್ಯಾಸ ನೀಡಿದ  ಕೃಷಿ ಮಹಾವಿದ್ಯಾಲಯದ  ಮುಖ್ಯಸ್ಥ ಡಾ.ಅಶೋಕ  ಸಜ್ಜನ  ಮಾತನಾಡಿ ಜನಸಂಖ್ಯೆಯ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುಲು ಯುವ  ಸಮೂಹ ಸಂಕಲ್ಪ ಮಾಡಬೇಕು. ಕೃಷಿಕ ಇಂದು ದ್ರೋಣ ತಂತ್ರಜ್ಞಾನದಿಂದ ಕೃಷಿ ಮಾಡಬೇಕು. ಮಳೆ ಹಾಗೂ ಮಾರುಕಟ್ಟೆ ಬೆಲೆ ಕೃಷಿಕರಿಗೆ ದೊರಕುವುದಿಲ್ಲ.  ಕೃಷಿ ಕೌಶಲ್ಯ ಕಾರ್ಮಿಕರ ಕೊರತೆಯಿಂದ ಆಧುನಿಕ ತಂತ್ರಜ್ಞಾನ ಅತ್ಯವಶ್ಯ ಎಂದರು. 

ಸಾಹಿತಿ ಕವಿತಾ  ಕಲ್ಯಾಣಪ್ಪಗೋಳ ಜಾನಪದ ತಜ್ಞ  ಡಾ ಸಿಂಪಿ ಲಿಂಗಣ್ಣನವರ ಸಾಹಿತ್ಯ ಕುರಿತು ಮಾತನಾಡುತ್ತ ಸಿಂಪಿ ಲಿಂಗಣ್ಣ ಶಿಕ್ಷಕರು. ಬರಹಗಾರ.ಜಾನಪದ ತಜ್ಞ. ಪ್ರಕಾಶಕರಾಗಿ ಸೇವೆ ಸ್ಮರಣೀಯ ಹಲಸಂಗಿ ಗೆಳೆಯರ ಬಳಗ  ರಚಿಸಿಕೊಂಡು  ಗರತಿಯ ಹಾಡು ಯು ಸಂಪಾದಿಸಿದರು. ಕೊಪ್ಪಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು ಎಂದರು. 

ಲೇಖಕಿ. ಕವಿಯಿತ್ರಿ ಡಾ ಜಯದೇವಿ ಗಾಯಕವಾಡ ಮಾತನಾಡುತ್ತ ಸಾಕಿ ಕೇಳಿದ ರುಬಾಯಿ ಕೃತಿ  ನಾಲ್ಕು ಭಾಷೆಗಳಿಗೆ ಭಾಷಾಂತರಗೊಂಡಿದೆ. ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನ ದಿಂದ ಕಾಣಬೇಕು. ಭಾರತ ಸಂವಿಧಾನದಲ್ಲಿ ಮಹಿಳೆಯರ ಸ್ಥಾನ ಹಾಗು ಆಸ್ತಿ ಹಕ್ಕು ಕಾಯ್ದೆ ನೀಡಿದ್ದರು ದೌರ್ಜನ್ಯಗಳು ನಿಲ್ಲುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ ವಿ ಡಿ  ಐಹೊಳ್ಳಿ ಮಾತನಾಡಿ ಪ್ರತಿಭೆ ಹುಟ್ಟಗುಣ ಪಾಂಡಿತ್ಯ ಪಡೆದ ಗುಣ. ಬದುಕನ್ನು ಪ್ರೀತಿಯಿಂದ ಅನುಭವಿಸಿದಾಗ ಶ್ರೇಷ್ಠ ಸಾಹಿತ್ಯ ಸಾಧ್ಯ ಎಂದರು. 

ಅರುಣ ಲಿಂಗಣ್ಣ ಸಿಂಪಿ ಮಾತನಾಡಿದರು. ಕಲ್ಪನಾ ಅರುಣ ಸಿಂಪಿ. ಚಡಚಣ ಕಸಾಪ ಅಧ್ಯಕ್ಷ ಸಿದ್ದಪ್ಪ ಮಾನೆ, ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವೇದಿಕೆಯ ಮೇಲಿದ್ದರು. 
ರವಿ ಕಿತ್ತೂರ ಸ್ವಾಗತಿಸಿದರು. ಡಾ ಸಂಗಮೇಶ ಮೇತ್ರಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಮಹೆತಾಬ ಕಾಗವಾಡ ವಂದಿಸಿದರು. 

 ವಿಜಯಪುರ ತಾಲೂಕ ಕಸಾಪ ಅಧ್ಯಕ್ಷ ಡಾ ಆನಂದ  ಕುಲಕರ್ಣಿ, ಅಭಿಷೇಕ ಚಕ್ರವರ್ತಿ, ಮಹಮ್ಮದಗೌಸ ಹವಾಲ್ದಾರ ಕಮಲಾ ಮುರಾಳ, ಜಯಶ್ರೀ ಹಿರೇಮಠ. ಎಸ್ ಎಲ್ ಇಂಗಳೇಶ್ವರ, ಕೆ ಎಸ್ ಹಣಮಾಣಿ, ಡಾ.ಸಿದ್ದಪ್ಪ ಹೊಸಮನಿ, ಡಾ.ಶೀಲಾದೇವಿ ಬಿರಾದಾರ, ಬಿ ಎಂ ಅಜೂರ, ಲತಾ ಗುಂಡಿ, ವೈ ಎಚ್ ಲಂಬು, ಸಿದ್ದಣ್ಣ  ಸಾತಲಗಾಂವ, ಡಾ.ಸುರೇಶ ಕಾಗಲಕರ, ಜಿ ಎಸ್ ಬಳ್ಳೂರ, ಅಹಮ್ಮದ ವಾಲಿಕಾರ, ಡಾ ರಾಜುಕಮಾರೆ ಮಾಳಗೆ, ಪಾರ್ವತಿ ಜೋರಾಪೂರಮಠ, ಶೋಭಾ ಮೇಡೆಗಾರ, ಜ್ಯೋತಿ  ಹಿಪ್ಪರಗಿ, ಶಾಂತಿ ವಿಭೂತಿ, ಟಿ ಆರ ಹಾವಿನಾಳ, ಭೀಮಣ್ಣ ಮಸಬಿನಾಳ, ಮೊಹಮ್ಮದಇಕ್ಬಾಲ ಅವಟಿ, ಶ್ರೀಕಾಂತ ನಾಡಗೌಡ, ಮುಂತಾದವರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.