ಜನಜಾಗೃತಿ ವೇದಿಕೆಯಿಂದ ಎಸ್ಪಿ ನಿಂಬರಗಿಗೆ ಮನವಿ

Feb 4, 2025 - 23:17
 0
ಜನಜಾಗೃತಿ ವೇದಿಕೆಯಿಂದ ಎಸ್ಪಿ ನಿಂಬರಗಿಗೆ ಮನವಿ

ವಿಜಯಪುರ : ನಗರದ ವಾರ್ಡ ನಂ.೧ ನೆಹರು ನಗರ ಮತ್ತು ಶಕ್ತಿ ನಗರದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು, ಅಷ್ಟೇ ಅಲ್ಲದೆ ಸಾರ್ವಜನಿಕರು ಭಯ ಬೀತಗೊಂಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ಲಕ್ಷ್ಮಣ ಬಿ ನಿಂಬರಗಿ ಅವರಿಗೆ ವಿಜಯಪುರ ಜನಜಾಗೃತಿ ವೇದಿಕೆ ವತಿಯಿಂದ ಮನವಿ ಸಲ್ಲಿಸಿದರು.                

ವಿಜಯಪುರ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷೆ ಬೋರಮ್ಮ ಶಿವಪೂಜೆ ಮಾತನಾಡಿ ವಿಜಯಪುರ ನಗರದಲ್ಲಿ ಕಳ್ಳಕಾಕರ ಹಾವಳಿಯನ್ನು ಹೆಚ್ಚಾಗಿದ್ದು ಇತ್ತೀಚಿನ ಕಳತನ ಘಟನೆಗಳನ್ನು ನೋಡಿ  ಸಾರ್ವಜನಿಕರು ಭಯಭೀತರಾಗಿದ್ದಾರೆ ರಾತ್ರಿ ಪೊಲೀಸ್ ಬೀಟ್ ಹೆಚ್ಚಿಸಿ ಸಾರ್ವಜನಿಕರಿಗೆ ತಿಳುವಳಿಕೆಯನ್ನು ಕೊಟ್ಟು ಪೊಲೀಸ್ ರಕ್ಷಣೆಯನ್ನು ನೀಡಬೇಕೆಂದರು. ಮನವಿಯನ್ನು ಪರಿಗಣಿಸಿ ಸಾರ್ವಜನಿಕರಿಗೆ ಧೈರ್ಯವನ್ನು ತುಂಬಬೇಕೆAದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.            

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ  ಡಾ.ಮಹಮ್ಮದ್ ರಫೀಕ್  ಗುರಿಕಾರ ಇನ್ನುಳಿದ ಪದಾಧಿಕಾರಿಗಳಾದ  ಜಯಶ್ರೀ ಚಿಗರಿ, ಸಂಗೀತ ಬುಡಕೆ, ಭಾರತಿ ಡೊಮ್ಮನಾಳ, ಯಾಸಿನ್ ಜಮಾದಾರ, ವಿವೇಕ್ ಮಿರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.