ಸಹಕಾರ ಸಂಘ ರಚನೆ ಆಗುವವರೆಗೆ ಅಹೋರಾತ್ರಿ ಹೋರಾಟ ೧೩ನೇ ದಿನಕ್ಕೆ ಮುಂದವರಿಕೆ

Jan 31, 2025 - 17:37
 0
ಸಹಕಾರ ಸಂಘ ರಚನೆ ಆಗುವವರೆಗೆ ಅಹೋರಾತ್ರಿ ಹೋರಾಟ ೧೩ನೇ ದಿನಕ್ಕೆ ಮುಂದವರಿಕೆ

ವಿಜಯಪುರ : ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ  ಭೇಟಿ ನೀಡಿ ಭರವಸೆ ನೀಡಿದರು.


    ಭರವಸೆ ನೀಡಿದ ನಂತರ ಮಾತನಾಡುತ್ತ, ನಿಮ್ಮ ಬೇಡಿಕೆಯು ನ್ಯಾಯಯುತವಾಗಿದ್ದು, ಇದಕ್ಕೆ ಸರಕಾರವು ಸ್ಪಂದಿಸುವದು ತಮ್ಮ ಮನವಿಯನ್ನು ಕಳುಹಿಸಲಾಗುವದು. ಹಾಗೂ ನಮ್ಮ ಹಂತದಲ್ಲಿರುವ ಬೇಡಿಕೆಗಳ ಕುರಿತು ತಕ್ಷಣವೇ ಸಭೆ ಕರೆದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುವದು. ಹಾಗೂ ವಿಜಯಪುರ ಜಿಲ್ಲೆಯ ಪ್ರತಿಯೊಂದು ವಸತಿ ಶಾಲಾ ಹಾಸ್ಟೇಲ್ ನೌಕರರ ವೇತನವು ಇನ್ನು ಬಾಕಿ ಇದ್ದು, ಅದರ ಕುರಿತು ಕ್ರಮ ಕೈಗೊಳ್ಳಲಾಗುವದು. ತಕ್ಷಣವೇ ವಿಜಯಪುರ ತಾಲೂಕಿನ ನೌಕರರ ವೇತನ ಜಮೆ ಮಾಡುವದರ ಮೂಲಕ ಹೋರಾಟಕ್ಕೆ ಸ್ಪಂದಿಸಿ ಬೆಂಬಲ ವ್ಯಕ್ತಪಡಿಸಿದರು. 


    ನಂತರ ಜಿಲ್ಲಾಧ್ಯಕ್ಷ ಹುಲಗಪ್ಪ ಎಚ್. ಚಲವಾದಿ ಮಾತನಾಡಿ ಇನ್ನು ನಮ್ಮ ಹಲವಾರು ಬೇಡಿಕೆಗಳು ಬಾಕಿ ಇದ್ದು, ಕೇವಲ ವಿಜಯಪುರ ತಾಲೂಕಿನ ೨ ತಿಂಗಳ ವೇತನ ಜಮೆ ಮಾಡಲಾಗಿದೆ. ಇನ್ನುಳಿದ ತಾಲೂಕುಗಳ ವೇತನ ಜಮಾ ಆಗಿರುವದಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಹಾಗೂ ಮುಖ್ಯವಾಗಿ ಬೀದರ ಮಾದರಿಯಲ್ಲಿ ಸಹಕಾರ ಸಂಘ ರಚನೆ ಆಗುವವರೆಗೆ ನಮ್ಮ ಈ ಹೋರಾಟ ಮುಂದುವರೆಸಲಾಗುವದು ಎಂದರು ತಿಳಿಸಿದರು.


    ಸಂಘದ ಲಕ್ಷö್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಯಮನಪ್ಪ ಬಜಂತ್ರಿ  ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ಶೈಲಾ ಉಣ್ಣಿಬಾಯಿ, ರಾಧಾಬಾಯಿ ಬಜಂತ್ರಿ, ಶಿವಯೋಗೆಪ್ಪ ದೊಡಮನಿ, ಲಕ್ಷಿö್ಮÃಪುತ್ರ ಕುರಮಲ್, ಸುಖನ್ಯಾ ಚವ್ಹಾಣ, ಲಕ್ಷಿö್ಮ ಸೂರ್ಯವಂಶಿ, ಸಂಜುಕುಮಾರ ನವಬಾಗ, ಲಕ್ಷö್ಮಣ ಅಲ್ಲಾಮೀನ, ಬಾಬು ಸಾಯಿಪಾರ್ಕ, ಜಯಭೀಮ ಭೂತನಾಳ, ರಾಜು ಬನಸೋಡೆ, ಮಲ್ಲು ತಾಂಬೆ, ಶರಣು ಯಡಳ್ಳಿ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ ಹಾಜರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.